ಸದ್ಯ ವಿಸ್ತರಣೆ ಮಾತ್ರ; ಜನವರಿಯಲ್ಲಿ ಪುನಾರಚನೆ? ಆರು ತಿಂಗಳು ಸಚಿವರ ಕಾರ್ಯವೈಖರಿ ಮೇಲೆ ನಿಗಾ
Team Udayavani, Jul 30, 2020, 6:58 AM IST
ಬೆಂಗಳೂರು: ರಾಜ್ಯ ಸರಕಾರಕ್ಕೆ ವರ್ಷ ಭರ್ತಿಯಾದ ಬೆನ್ನಲ್ಲೇ ಸಂಪುಟ ಸರ್ಜರಿಯ ಮಾತು ಕೇಳಿ ಬರುತ್ತಿದೆ.
ಆದರೆ ಸದ್ಯ ವಿಸ್ತರಣೆಯನ್ನಷ್ಟೇ ಮಾಡಿ, ಮುಂದಿನ ವರ್ಷ ಪುನಾರಚಿಸುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.
ಈ ಬಗ್ಗೆ ಪಕ್ಷ ಉನ್ನತ ಮಟ್ಟದಲ್ಲೂ ಚರ್ಚೆಯಾಗಿದೆ.
ಕೋವಿಡ್ 19 ಸ್ಥಿತಿಗತಿ ಅವಲೋಕಿಸಿ ಜನವರಿ ಹೊತ್ತಿಗೆ ಸಂಪುಟ ಪುನಾರಚನೆ ಬಗ್ಗೆ ತೀರ್ಮಾನಿಸಬಹುದು ಎಂದು ಮೂಲಗಳು ತಿಳಿಸಿವೆ.
ಅಂತಿಮ ಕ್ಷಣದ ಬೆಳವಣಿಗೆ ಹೊರತುಪಡಿಸಿದರೆ ಪುನಾರಚನೆ ಸದ್ಯಕ್ಕಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ‘ಉದಯವಾಣಿ’ಗೆ ತಿಳಿಸಿವೆ.
6 ತಿಂಗಳು ಪರೀಕ್ಷಾ ಅವಧಿ
ಹಾಗಾಗಿ ಹಾಲಿ ಸಚಿವರ ಕಾರ್ಯವೈಖರಿ ಮೇಲೆ ಪಕ್ಷ ನಿಗಾ ಇರಿಸಲಾರಂಭಿಸಿದೆ. ಸಚಿವರಾದಾಗಿನಿಂದ ಈವರೆಗಿನ ಕಾರ್ಯನಿರ್ವಹಣೆ ಹಾಗೂ ಮುಂದಿನ ಆರು ತಿಂಗಳ ಕಾರ್ಯವೈಖರಿಯನ್ನಾಧರಿಸಿ ಸಂಪುಟ ಪುನಾರಚನೆಯಾಗಲಿದೆ. ಸಚಿವ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಸರಕಾರ ರಚನೆಗೆ ನೆರವಾದ 17 ಮಂದಿ ಪೈಕಿ ಈಗಾಗಲೇ 10 ಮಂದಿ ಸಚಿವರಾಗಿದ್ದಾರೆ.
ಹಿಂದೆ ಕೊಟ್ಟ ಮಾತಿನಂತೆ ಉಪಚುನಾವಣೆಗೆ ಸ್ಪರ್ಧಿಸದ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ಖಚಿತ. ಜತೆಗೆ ಸಚಿವ ಸ್ಥಾನ ತೊರೆದು ಬಂದ ಎಂ.ಟಿ.ಬಿ. ನಾಗರಾಜ್ ಅವರಿಗೂ ಸಚಿವ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಇದಕ್ಕೆ ಆಕ್ಷೇಪವೂ ಇದ್ದಂತಿಲ್ಲ. ಹಾಗಾಗಿ ಈ ಇವರಿಬ್ಬರು ಹಾಗೂ ಮೂಲ ಬಿಜೆಪಿಯಿಂದ ಒಬ್ಬರು ಅಥವಾ ಇಬ್ಬರಿಗೆ ಸಚಿವ ಸ್ಥಾನ ನೀಡಿ ಸಂಪುಟ ವಿಸ್ತರಣೆ ಮಾಡಬಹುದು ಎಂದು ಹೇಳಲಾಗಿದೆ.
ಸಚಿವರ ಮೌಲ್ಯಮಾಪನ
ಪ್ರಥಮ ಸಂಪುಟ ವಿಸ್ತರಣೆಯಲ್ಲಿ ಸಚಿವರಾದವರ ಒಂದು ವರ್ಷದ ಅಧಿಕಾರಾವಧಿ ಆ. 20ಕ್ಕೆ ಪೂರ್ಣಗೊಳ್ಳಲಿದೆ. ಈವರೆಗಿನ ಅವರ ಕಾರ್ಯ ನಿರ್ವಹಣೆ ಹಾಗೂ ಮುಂದಿನ 6 ತಿಂಗಳಲ್ಲಿ ಅವರ ನಿರ್ವಹಣೆ ಮೇಲೂ ನಿಗಾ ವಹಿಸಲಾಗುತ್ತದೆ. ಒಟ್ಟಾರೆ ಒಂದೂವರೆ ವರ್ಷದ ಕಾರ್ಯ ವೈಖರಿ ಮೌಲ್ಯಮಾಪನ ವರದಿ ಆಧಾರ ಮೇಲೆ ಸಂಪುಟ ಪುನಾಚರನೆ ನಿರ್ಧಾರವಾಗಲಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ