ಚಿಕ್ಕಬಳ್ಳಾಪುರ:ಸಾಲಬಾಧೆಯಿಂದ ನೊಂದು ನೇಣಿಗೆ ಶರಣಾದ ರೈತ
Team Udayavani, Aug 26, 2017, 10:34 AM IST
ಚಿಕ್ಕಬಳ್ಳಾಪುರ: ತಾಲೂಕಿನ ದೊಡ್ಡ ಕಿರುಗುಂಬಿ ಎಂಬಲ್ಲಿ ಸಾಲಬಾಧೆಯಿಂದ ನೊಂದು ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಶನಿವಾರ ನಡೆದಿದೆ.
ದೊಡ್ಡ ರಾಮಪ್ಪ (68) ಎಂಬ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತ.
ಟ್ರ್ಯಾಕ್ಟರ್ ಮತ್ತು ಬೋರ್ವೆಲ್ ಕೊರೆಸಲು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದು , ಬೆಳೆ ನಷ್ಟ ಹೊಂದಿ ತೀರಿಸಲಾಗಿದದೆ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.