ಕಳೆನಾಶಕ ಸೇವಿಸಿ ಮಗು ಸಾವು
Team Udayavani, Nov 13, 2019, 3:04 AM IST
ಮೂಡಿಗೆರೆ: ಜ್ಯೂಸ್ ಎಂದು ಭಾವಿಸಿ ಕಳೆನಾಶಕ ಕುಡಿದಿದ್ದ ಮೂರು ವರ್ಷದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿದೆ. ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಪ್ರವೀಣ್ ಮತ್ತು ಪೂಜಿತಾ ದಂಪತಿಯ ಏಕೈಕ ಪುತ್ರ ಅಗಸ್ತ್ಯ (3) ಮೃತ ಮಗು. ಅ.24ರಂದು ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ತೋಟದ ಕಳೆಗಳಿಗೆ ಸಿಂಪಡಿಸಲು ತಂದಿಟ್ಟಿದ್ದ ಕಳೆನಾಶಕ ಬಾಟಲ್ನ್ನು ಜ್ಯೂಸ್ ಎಂದು ಭಾವಿಸಿ ಸೇವಿಸಿತ್ತು.
ವಿಷ ದೇಹದೊಳಗೆ ಹೋಗುತ್ತಿದ್ದಂತೆ ಮಗು ಜೋರಾಗಿ ಕೂಗಲಾರಂಭಿಸಿತು. ತಕ್ಷಣ ಮನೆಯವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸತತ 8 ದಿನ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.