ಮೋಡ ಬಿತ್ತನೆ ಶೀಘ್ರ ಆರಂಭ: ದೇಶಪಾಂಡೆ
Team Udayavani, Jun 23, 2019, 3:03 AM IST
ಧಾರವಾಡ: ರಾಜ್ಯದಲ್ಲಿ ಮುಂಗಾರು ವಿಳಂಬ ಹಾಗೂ ಮಳೆ ಕೊರತೆ ಕಾರಣ ಆದಷ್ಟು ಬೇಗ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟರೊಳಗೆ ಮಳೆ ಆಗಬೇಕಿತ್ತು. ಆದರೆ, “ವಾಯು’ ಸೈಕ್ಲೋನ್ ಪರಿಣಾಮ ಸಮಸ್ಯೆ ಉಂಟಾಗಿದೆ. ಹೀಗಾಗಿ, ಮೋಡ ಬಿತ್ತನೆ ಕಾರ್ಯ ಆರಂಭಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಆದಷ್ಟು ಬೇಗ ಮೋಡ ಬಿತ್ತನೆ ಕಾರ್ಯ ಆರಂಭಗೊಳ್ಳಲಿದೆ. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಮೋಡ ಬಿತ್ತನೆಗಾಗಿ ಸೆಂಟರ್ ನಿರ್ಮಾಣ ಆಗಲಿದ್ದು, ಈ ಸೆಂಟರ್ ಮೂಲಕವೇ ಮೋಡ ಬಿತ್ತನೆ ಕಾರ್ಯ ಆಗಲಿದೆ ಎಂದರು.