ಸಂಪುಟ ವಿಸ್ತರಣೆ: ಅಮಿತ್ ಶಾ ಭೇಟಿಯಾಗಲು ಸಿಎಂಗೆ ಅವಕಾಶ
Team Udayavani, May 11, 2022, 11:13 AM IST
ಬೆಂಗಳೂರು: ದಿಲ್ಲಿ ಪ್ರಚಾರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೊನೆಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಅವಕಾಶ ಲಭಿಸಿದೆ.
ಇಂದು ಮಧ್ಯಾಹ್ನ 12.30 ಕ್ಕೆ ಸಿಎಂ ಅವರ ಭೇಟಿಗೆ ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಸಾಧ್ಯತೆಗೆ ಮತ್ತೆ ಜೀವ ಬಂದಿದೆ.
ಕರ್ನಾಟಕದ ವಿದ್ಯಮಾನಗಳ ಬಗ್ಗೆ ಸಾಕಷ್ಟು ಮಾಹಿತಿ ಇರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಬೊಮ್ಮಾಯಿ ಭೇಟಿಯಾದ ಬಳಿಕ ಅಮಿತ್ ಶಾ ಭೇಟಿಗೆ ಸಮಯ ನಿಗದಿಯಾಗಿದೆ.
ಇದನ್ನೂ ಓದಿ:ಜಾತಿಗಣತಿ ವರದಿ ಒಪ್ಪಿಕೊಳ್ಳುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯ
ಸಂಪುಟ ವಿಸ್ತರಣೆ ಸಂಬಂಧ ಬೊಮ್ಮಾಯಿ ಇಷ್ಟು ಬಾರಿ ದಿಲ್ಲಿಗೆ ಬಂದಿದ್ದರೂ ಚರ್ಚೆಗೆ ಶಾ ಸಿದ್ದವಿರಲಿಲ್ಲ. ಆದರೆ ಈಗ ಒಪ್ಪಿಗೆ ಲಭಿಸಿರುವುದು ಸಚಿವಾಕಾಂಕ್ಷಿಗಳಿಗೆ ಮತ್ತೆ ಆಸೆ ಹುಟ್ಟಿಸಿದೆ.