ಕಾಂಗ್ರೆಸ್ ವರದಿ ಸುಳ್ಳಿನ ಕಂತೆ: ಎನ್.ರವಿಕುಮಾರ್
Team Udayavani, Oct 15, 2019, 3:00 AM IST
ಬೆಂಗಳೂರು: ಕಾಂಗ್ರೆಸ್ನ ಪದಾಧಿಕಾರಿಗಳು ರಾಜ್ಯದ ಪ್ರವಾಹವನ್ನು ಅಧ್ಯಯನ ಮಾಡದೇ ಕಚೇರಿಯಲ್ಲೇ ಕುರಿತು ಬರೆದ ಸುಳ್ಳಿನ ಕಂತೆಯನ್ನು ವರದಿ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಬಿಡುಗಡೆ ಮಾಡಿರುವ ವರದಿಯಲ್ಲಿ ಸಾವಿರ ಗ್ರಾಮಗಳ ಪುನರ್ ನಿರ್ಮಾಣ ಮಾಡಬೇಕು ಎಂದಿದ್ದಾರೆ.
ಆ ಒಂದು ಸಾವಿರ ಗ್ರಾಮಗಳ ಪಟ್ಟಿ ನೀಡಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಪಕ್ಷವು ಅತ್ಯಂತ ಉತ್ಪ್ರೇಕ್ಷೆಯುಳ್ಳ ಹಾಗೂ ಬೋಗಸ್ ವರದಿ ಬಿಡುಗಡೆ ಮಾಡಿದೆ. ಪ್ರವಾಹದಿಂದ 35 ಸಾವಿರ ಕಿಲೋ ಮೀಟರ್ ರಸ್ತೆ ಹಾಳಾಗಿದೆ ಎಂದಿದ್ದಾರೆ. ವಾಸ್ತವವಾಗಿ 5 ಕಿ.ಮೀ. ರಸ್ತೆ ನಾಶವಾಗಿರಬಹುದು. 30 ಲಕ್ಷ ಎಕರೆ ಬೆಳೆ ಹಾನಿ ಎಂದಿದ್ದಾರೆ. 24 ಲಕ್ಷ ಎಕರೆ ಬೆಳೆ ಹಾನಿಯಾಗಿರಬಹುದು. ಮೂರು ಲಕ್ಷ ಮನೆಗಳು, 3 ಸಾವಿರ ಹಳ್ಳಿಗಳು ಭಾಗಶಃ ನೀರಿನಿಂದ ತುಂಬಿವೆ ಎಂದು ಸುಳ್ಳಿನ ಕಂತೆಯನ್ನೇ ಬಿಡುಗಡೆ ಮಾಡಿದ್ದಾರೆ.
ಇದಕ್ಕೆ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕರಾದ ಧ್ರುವ ನಾರಾಯಣ್, ಆರ್.ವಿ.ದೇಶಪಾಂಡೆ, ಮಹದೇವಪ್ಪ ಅವರ ವರದಿಗಳನ್ನು ನಂಬಲು ಸಾಧ್ಯವಿಲ್ಲ. ಬರೀ ಆರೋಪ ಮತ್ತು ಚಿತ್ರಗಳಿವೆ. ಸಾವಿರ ಗ್ರಾಮಗಳು ನೆಲ ಸಮವಾಗಿವೆ ಎಂದು ಕಾಂಗ್ರೆಸ್ ನಾಯಕರು ವರದಿಯಲ್ಲಿ ಹೇಳಿದ್ದಾರೆ. ಆ ಗ್ರಾಮಗಳ ಪಟ್ಟಿ ನೀಡಲಿ ಎಂದು ಸವಾಲೆಸೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್