ನಾಯಕರ ಮಕ್ಕಳ ಮದ್ವೆಗೂ ಕೊರೊನಾ ಕಿರಿಕಿರಿ?
Team Udayavani, Mar 5, 2020, 3:02 AM IST
ವಿಧಾನ ಪರಿಷತ್: ಮದುವೆ ಮತ್ತಿತರ ಸಭೆ ಸಮಾರಂಭಗಳಲ್ಲಿ ಸಾಧ್ಯವಾದಷ್ಟು ಹೆಚ್ಚು ಜನ ಸೇರದಿರುವುದು ಒಳ್ಳೆಯದು ಅಂತೀರಾ. ಹಾಗಿದ್ರೆ, ನಿಮ್ಮ ಸಚಿವ (ಶ್ರೀರಾಮುಲು)ರ ಪುತ್ರಿಯ ಮದುವೆ ಇದೆ. ಅಲ್ಲಿಯ ಪರಿಸ್ಥಿತಿ ಏನು? ಮೇಲ್ಮನೆಯಲ್ಲಿ ಕೊರೊನಾ ವೈರಸ್ಗೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರಿಸುತ್ತಿದ್ದ ಸಚಿವ ಡಾ.ಸುಧಾಕರ್ ಅವರ ಮೇಲೆ ತೂರಿಬಂದ ಪ್ರಶ್ನೆ ಇದು.
ಸಾಧ್ಯವಾದಷ್ಟು ಮದುವೆಯಂತಹ ಸಭೆ- ಸಮಾರಂಭಗಳಿಗೆ ಹೆಚ್ಚು ಜನ ಸೇರಿಸುವುದನ್ನು ಕಡಿಮೆ ಮಾಡವುದು ಉತ್ತಮ ಎಂದು ಸಚಿವರು ಹೇಳಿದರು. ಆಗ ಕಾಂಗ್ರೆಸ್ ಸದಸ್ಯ ಕೆ.ಸಿ. ಕೊಂಡಯ್ಯ, “ಹಾಗಿದ್ರೆ ನಿಮ್ಮ ಸಚಿವರ ಪುತ್ರಿಯ ಮದುವೆ ಇದೆ. ಅಲ್ಲಿಯ ಸ್ಥಿತಿ ಏನು?’ ಎಂದು ಚಟಾಕಿ ಹಾರಿಸಿದರು. ಇದಕ್ಕೆ ಬಸವರಾಜ ಹೊರಟ್ಟಿ ದನಿಗೂಡಿಸಿದರು.