ಹರಕೆ ತೀರಿಸಲು ಜಾತ್ರೆಯಲ್ಲಿ ಜೋಡಿ ನೃತ್ಯ, ಚುಂಬನ!
Team Udayavani, Feb 29, 2020, 3:04 AM IST
ದಾವಣಗೆರೆ: ಸಾಮಾನ್ಯವಾಗಿ ದೇವರಿಗೆ ಹೂವು-ಹಣ್ಣು, ಉಡಕ್ಕಿ, ಬೇಟೆ, ಸಿಹಿಯೂಟ..ಹೀಗೆ ನಾನಾ ವಿಧದಲ್ಲಿ ಹರಕೆ ತೀರಿಸುವುದು ಸಾಮಾನ್ಯ. ಆದರೆ, ದಾವಣಗೆರೆ ತಾಲೂಕಿನ ಮಾಗಾನಹಳ್ಳಿಯ ಊರಮ್ಮನ ಜಾತ್ರೆಯಲ್ಲಿ ನೃತ್ಯ ಮಾಡಿ, ಹರಕೆ ತೀರಿಸುವ ವಿಶಿಷ್ಟ ಪದ್ಧತಿಯಿದ್ದು, ಶುಕ್ರವಾರ ಭಕ್ತರು ನೃತ್ಯ ಹರಕೆ ತೀರಿಸಿದ್ದಾರೆ.
ಮಾಗಾನಹಳ್ಳಿ ಮಾತ್ರವಲ್ಲ, ಸುತ್ತ ಮುತ್ತಲ ಗ್ರಾಮಗಳಲ್ಲಿ 13 ವರ್ಷಕ್ಕೊಮ್ಮೆ ನಡೆಯುವ ಊರಮ್ಮನ ಜಾತ್ರೆ ಸಂಭ್ರಮ ಮನೆ ಮಾಡಿದ್ದು, ಶುಕ್ರವಾರ ಆಶಾದಿ ನೃತ್ಯದಿಂದ ಹರಕೆ ತೀರಿಸಲಾಯಿತು. ಗ್ರಾಮದ ಮುಖಂಡ ನೃತ್ಯಗಾತಿ ಜತೆಗೆ ಹೆಜ್ಜೆ ಹಾಕುವುದು ಮಾತ್ರವಲ್ಲ, ಸಾವಿರಾರು ಜನರ ಎದುರೇ ಚುಂಬಿಸುತ್ತಾರೆ. ನೃತ್ಯ ದಿಂದ ದೇವಿಯ ಹರಕೆ ತೀರಿಸುವಂತಹ ಈ ಪದ್ಧತಿಯನ್ನು ಇಂದಿಗೂ ಅನೂಚಾನವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಊರಮ್ಮನ ಜಾತ್ರೆ ಅಂಗವಾಗಿ ಆಶಾದಿ ನೃತ್ಯ ಮಾಡುವಂತಹವರನ್ನೇ ಆಹ್ವಾನಿಸಲಾಗುತ್ತದೆ. 70, 40 ಮತ್ತು 35 ವಯೋ ಮಾನದ ಮಹಿಳೆಯರು ಆಶಾದಿ ನೃತ್ಯ ಮಾಡುತ್ತಾರೆ. ಮುಖಂಡರೊಬ್ಬರು ಅವರೊಟ್ಟಿಗೆ ಹೆಜ್ಜೆ ಹೆಜ್ಜೆಗೆ ಹಾಕುತ್ತ, ಆಗಾಗ ಮುತ್ತು ನೀಡುವುದು, ಮತ್ತೆ ನೃತ್ಯ ಮಾಡುವುದು ನಡೆದೇ ಇರುತ್ತದೆ. ದೊಡ್ಡವರಷ್ಟೇ ಅಲ್ಲ, ಚಿಕ್ಕ ಮಕ್ಕಳು ಸಹ ನೃತ್ಯದಿಂದ ಊರಮ್ಮ ದೇವಿಗೆ ಹರಕೆ ತೀರಿಸಿದರು.
ವಯೋಮಾನದ ನಿರ್ಬಂಧವಿಲ್ಲದೆ ನೃತ್ಯ ಮಾಡಿ, ಊರಮ್ಮ ದೇವಿಗೆ ಹರಕೆ ತೀರಿಸುವುದರಿಂದ ಕುಟುಂಬಕ್ಕೆ ಮಾತ್ರವಲ್ಲ ಇಡೀ ಗ್ರಾಮಕ್ಕೆ ಒಳಿತಾಗುವುದು ಎಂಬ ಅಚಲ ನಂಬಿಕೆಯಿದೆ. ಹೀಗಾಗಿ ಈಗಲೂ ಈ ಪದ್ಧತಿ ಚಾಲ್ತಿಯಲ್ಲಿದ್ದು, ಅದನ್ನು ಮುಂದುವರಿಸಿಕೊಂಡು ಬರಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ