ಐವರು ಸಚಿವರಿಗೆ ನಿರ್ವಹಣೆ ಅಧಿಕಾರ
Team Udayavani, May 5, 2021, 6:40 AM IST
ಬೆಂಗಳೂರು: ಉಪ ಮುಖ್ಯಮಂತ್ರಿ ಸಹಿತ ಐವರು ಸಚಿವರಿಗೆ ಕೋವಿಡ್ನಿಭಾಯಿಸುವ ಹೊಣೆಗಾರಿಕೆ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ರೆಮಿಡಿಸಿವಿರ್ ಮತ್ತಿತರ ಔಷಧ ಪೂರೈಕೆ ನಿಗಾ ವಹಿಸಲು ಡಾ| ಸಿ.ಎನ್. ಅಶ್ವತ್ಥನಾರಾಯಣ, ಆಮ್ಲಜನಕ ಪೂರೈಕೆ ಕುರಿತು ಕೇಂದ್ರ ಸರಕಾರದ ಜತೆ ಸಮನ್ವಯ ಸಾಧಿಸಲು ಜಗದೀಶ್ ಶೆಟ್ಟರ್, ಹಾಸಿಗೆ ವ್ಯವಸ್ಥೆ ನೋಡಿಕೊಳ್ಳಲು ಬಸವರಾಜ ಬೊಮ್ಮಾಯಿ ಮತ್ತು ಆರ್. ಅಶೋಕ್ ಅವರನ್ನು ನೇಮಿಸಲಾಗಿದ್ದರೆ, ಕೋವಿಡ್ ವಾರ್ ರೂಂ ಮತ್ತು ಸಹಾಯವಾಣಿ ಉಸ್ತುವಾರಿಯನ್ನು ಅರವಿಂದ ಲಿಂಬಾವಳಿ ಅವರಿಗೆ ವಹಿಸಲಾಗಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ.ಯ ಅಂತಿಮ ವರ್ಷದ ವೈದ್ಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಸೇವೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.
ಜಿಲ್ಲಾ ಉಸ್ತವಾರಿ ಸಚಿವರು ತತ್ಕ್ಷಣ ತಮ್ಮ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿ ಸ್ಥಳೀಯವಾಗಿ ಸಮಸ್ಯೆ ನಿವಾರಿಸುವಂತೆ ಸಿಎಂ ಕಟ್ಟಪ್ಪಣೆ ಮಾಡಿದ್ದಾರೆ. ಜಿಲ್ಲಾ ಮಟ್ಟದ ವೈಫಲ್ಯಗಳಿಗೆ ನೀವೇ ಹೊಣೆಗಾರರು ಎಂದು ಎಚ್ಚರಿಸಿದ್ದಾರೆ.
ಹೊಣೆಗಾರಿಕೆ ಹಂಚಿಕೆ :
ಕೋವಿಡ್ ನಿರ್ವಹಣೆಯ ಹೊಣೆಯನ್ನು ಐವರು ಸಚಿವರಿಗೆ ವಹಿಸಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸ್ವತಃ ಸಿಎಂ ವಿವರ ನೀಡಿದರು.
ಯಾರಿಗೆ ಯಾವ ಹೊಣೆ? :
ರೆಮಿಡಿಸಿವಿರ್- ಡಾ| ಸಿ.ಎನ್. ಅಶ್ವತ್ಥನಾರಾಯಣ
ಆಮ್ಲಜನಕ- ಜಗದೀಶ್ ಶೆಟ್ಟರ್
ಹಾಸಿಗೆ ನಿರ್ವಹಣೆ- ಬಸವರಾಜ ಬೊಮ್ಮಾಯಿ, ಆರ್. ಅಶೋಕ್
ವಾರ್ರೂಂ, ಸಹಾಯವಾಣಿ- ಅರವಿಂದ ಲಿಂಬಾವಳಿ
ಕೇಂದ್ರದ ಜತೆ ಸಂಪರ್ಕ :
ರಾಜ್ಯದ ಆಮ್ಲಜನಕ ಸರಬರಾಜನ್ನು 350 ಟನ್ಗಳಿಂದ 850 ಟನ್ಗೆ ಹೆಚ್ಚಿಸಲಾಗಿದೆ. ಜಿಂದಾಲ್ನಿಂದ ಮಹಾರಾಷ್ಟ್ರಕ್ಕೆ ಹೋಗು ತ್ತಿದ್ದ ಆಮ್ಲಜನಕವನ್ನು ರಾಜ್ಯಕ್ಕೆ ನೀಡಲು ಕೇಂದ್ರ ಸಚಿವರ ಜತೆ ಮಾತನಾಡಿದ್ದು, ಒಪ್ಪಿ ದ್ದಾರೆ. 5 ಲಕ್ಷ ರೆಮಿಡಿಸಿವಿರ್ ಆಮದಿಗೆ ನಿರ್ಧರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯ ಲಾಗುವುದು ಎಂದು ಸಿಎಂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ