ನಿಂತಿದ್ದ ವಾಹನಗಳಿಗೆ ಸಿ.ಟಿ.ರವಿ ಕಾರು ಡಿಕ್ಕಿ:ಇಬ್ಬರು ಬಲಿ
Team Udayavani, Feb 20, 2019, 12:00 AM IST
ಕುಣಿಗಲ್: ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಪ್ರಯಾ ಣಿಸುತ್ತಿದ್ದ ಕಾರು ರಸ್ತೆ ಬದಿಯಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಉರ್ಕೆಹಳ್ಳಿ ಬೈಪಾಸ್ ಬಳಿ ಮಂಗಳವಾರ ಬೆಳಗ್ಗಿನ ಜಾವ ಸಂಭವಿಸಿದೆ.
ಕನಕಪುರ ತಾಲೂಕು ಸೂರನಹಳ್ಳಿ ಗ್ರಾಮದ ಎಸ್.ಪಿ. ಸುನಿಲ್ ಗೌಡ (28), ಎಸ್.ಜಿ. ಶಶಿಕುಮಾರ್ (30) ಮೃತರು. ಮುನಿರಾಜು, ಎಸ್.ಎನ್. ಜಯಚಂದ್ರ, ಎಸ್.ಆರ್. ಮಂಜುನಾಥ್ ತೀವ್ರ ಗಾಯಗೊಂಡಿ ದ್ದಾರೆ. ಶಾಸಕ ಸಿ.ಟಿ. ರವಿ ಅಪಾಯ ದಿಂದ ಪಾರಾಗಿದ್ದಾರೆ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿ.ಟಿ. ರವಿ ಸ್ಪಷ್ಟನೆ
ಅಪಘಾತದ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಸಿ.ಟಿ. ರವಿ, ಉರ್ಕೆಹಳ್ಳಿ ರಾ.ಹೆ. 75ರ ಬಳಿ ನಡೆದದ್ದು ದುರದೃಷ್ಟಕರ ಘಟನೆ. ಈ ಬಗ್ಗೆ ನನಗೂ ನೋವಿದೆ. ಪಕ್ಷದ ಕಾರ್ಯಕ್ರಮ ಇದ್ದ ಕಾರಣ ನಾನು ಚೆನ್ನೈಗೆ ಹೋಗಲು ಮಂಗಳವಾರ 11.30ಕ್ಕೆ ಚಿಕ್ಕಮಗಳೂರಿನಿಂದ ಹೊರಟಿದ್ದೆ. ನಾನು ನಿದ್ರಿಸು ತ್ತಿದ್ದೆ. ಚಾಲಕ ಆಕಾಶ್ ಕಾರು ಚಲಾಯಿಸುತ್ತಿದ್ದ. ಕಾರು ಉರುಳಿ ಬಿದ್ದು ಏರ್ಬ್ಯಾಗ್ ಓಪನ್ ಆಗಿ ಎದೆ ಹಾಗೂ ಮೈ ಕೈ ತರಚಿ ನೋವು ಆದಾಗ ಎಚ್ಚರಗೊಂಡು ನೋಡಿದಾಗ ಇಬ್ಬರ ಶವ ಬಿದ್ದಿತ್ತು. ಕೂಡಲೇ ಪೊಲೀಸರಿಗೆ, ಆ್ಯಂಬುಲೆನ್ಸ್ಗೆ ಫೋನ್ ಮಾಡಿ ಶವ ಹಾಗೂ ಗಾಯಾಳು ಗಳನ್ನು ಆಸ್ಪತ್ರೆಗೆ ಕಳಿಸಿಕೊಟ್ಟು ಪೊಲೀಸರ ಅನುಮತಿ ಪಡೆದು ಬೆಂಗಳೂರಿಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದೇನೆ. ಚೆನ್ನೈ ಕಾರ್ಯಕ್ರಮ ರದ್ದುಪಡಿಸಿದ್ದೇನೆ. ಮೃತರು, ಗಾಯಾಳುಗಳ ಮನೆಗಳಿಗೆ ಹೋಗಿ ಅವರ ಸಂಬಂಧಿಕರಿಗೆ ಸಾಂತ್ವನ ಹೇಳುತ್ತೇನೆ ಎಂದು ಹೇಳಿದರು.
ಸಿ.ಟಿ. ರವಿ ಕಾಫೀನೇ ಕುಡಿಯಲ್ಲ, ಮದ್ಯ ಸೇವಿಸ್ತಾರಾ?
ಶಾಸಕ ಸಿ.ಟಿ. ರವಿ ಕಳೆದ 18 ವರ್ಷಗಳಿಂದ ಕಾಫಿ, ಟೀ, ಹಾಲನ್ನೇ ಕುಡಿಯುವುದಿಲ್ಲ. ಇನ್ನು ಮದ್ಯ ಸೇವನೆ ಮಾಡುತ್ತಾರೆಯೇ? ಎಂದು ಶಾಸಕ ಸಿ.ಟಿ.ರವಿ ಅವರ ಪತ್ನಿ ಪಲ್ಲವಿ ಪ್ರಶ್ನಿಸಿದ್ದಾರೆ. ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವುದು ತೀವ್ರ ನೋವುಂಟು ಮಾಡಿದೆ. ಈ ಅಪಘಾತ ಆಕಸ್ಮಿಕ. ಶೀಘ್ರದಲ್ಲಿಯೇ ಮೃತಪಟ್ಟ ಕುಟುಂಬಗಳ ಮನೆಗೆ ತೆರಳಿ ಸಾಂತ್ವನ ಹೇಳುತ್ತೇವೆ. ಅವರಿಗೆ ನೋವು ಸಹಿಸಿಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಘೇರಾವ್
ಘಟನೆಯಿಂದ ಸಿಟ್ಟಿಗೆದ್ದ ಯುವಕರು ಸ್ಥಳದಲ್ಲೇ ಇದ್ದ ಶಾಸಕ ಸಿ.ಟಿ. ರವಿ ಅವ ರಿಗೆ ಘೇರಾವ್ ಹಾಕಿ ಧಿಕ್ಕಾರ ಕೂಗಿ ದರು. ಆಸ್ಪತ್ರೆ ಮುಂದೆಯೂ ಮೃತರ ಸಂಬಂಧಿಕರು ಪ್ರತಿ ಭಟನೆ ನಡೆ ಸಿ ದರು. ಮೃತ ಸಂಬಂಧಿ ಪ್ರಸಾದ್ ಗೌಡ ಮಾತ ನಾಡಿ, ಶಾಸಕರು ಸೌಜನ್ಯ ಕ್ಕಾದರೂ ಗಾಯಾಳು ಗಳ ಯೋಗಕ್ಷೇಮ ವಿಚಾರಿಸಬಹುದಿತ್ತು. ಆದರೆ ಘಟನೆ ಮುಚ್ಚಿ ಹಾಕಲು ಯತ್ನಿಸಿ ತೆರಳಿದರು ಎಂದು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ