ಗೋಮಾಂಸ ತಿನ್ನುವವರು ಹೆಚ್ಚು ಕಾಲ ಉಳಿಯೋಕೆ ಸಾಧ್ಯವಿಲ್ಲ!
Team Udayavani, Oct 8, 2017, 1:18 PM IST
ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರೂ ಗೋಹತ್ಯೆಗೆ ಬೆಂಬಲ ನೀಡಿದ್ದರು..ಅಲ್ಲ ವಿರೋಧಿಸಿದ್ದರು… ಇದು ಬಿಜೆಪಿ ಶಾಸಕ, ಮಾಜಿ ಸಚಿವ ಸಿ.ಟಿ.ರವಿ ಅವರು ಮಾಡಿದ ವಿವಾದಾತ್ಮಕ ಭಾಷಣ.
ಬಿಜೆಪಿ ಮೌರ್ಯ ಸರ್ಕಲ್ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಸಾಯಿಖಾನೆ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ರವಿ ಅವರು ಕೆಲ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ.
‘ಇವತ್ತು ಯಾರು ಆಸ್ಪತ್ರೆಯ ಮುಂದೆ ಹೆಚ್ಚು ಕ್ಯೂ ನಿಲ್ಲುತ್ತಿದ್ದಾರೆ ಗೊತ್ತೆ, ಗೋಮಾಂಸ ತಿನ್ನುವವರು. ನೀವು ಪರೀಕ್ಷೆ ಮಾಡಿ, ನಾನೇನು ಇದನ್ನು ಸುಮ್ನೆ ಹೇಳ್ತಾ ಇಲ್ಲ. ಆಸ್ಪತ್ರೆಗೆ ಬರುವವರಲ್ಲಿ ಗೋಮಾಂಸ ತಿನ್ನುವವರು ಜಾಸ್ತಿ. ಗೋಮಾಂಸ ತಿನ್ನುವವರು ಪಾಪದ ಫಲ ಅನುಭವಿಸಲೇಬೇಕು. ಕೇವಲ ಬಾಯಿ ಚಪಲಕ್ಕೆ ಗೋಮಾಂಸ ತಿನ್ನುವವರು ಹೆಚ್ಚು ಕಾಲ ಉಳಿಯೋಕೆ ಸಾಧ್ಯವಿಲ್ಲ. 30 ವರ್ಷಕ್ಕೇ ಕಾಯಿಲೆಗೆ ತುತ್ತಾಗುತ್ತಾರೆ. ಗೋಮಾಂಸ ತಿನ್ನಬೇಡಿ ಬದಲಾಗಿ ಗೋಸಂರಕ್ಷಣಾ ಅಭಿಯಾನಕ್ಕೆ ಬೆಂಬಲ ನೀಡಿ’ ಎಂದರು.
ಭಾಷಣದ ಭರದಲ್ಲಿ ಬಾಯ್ತಪ್ಪಿ ‘ಅಂಬೇಡ್ಕರ್ ಅವರೂ ಗೋಹತ್ಯೆಗೆ ಬೆಂಬಲ ನೀಡಿದ್ದರು’ ಎಂದು ಬಳಿಕ ಸರಿಪಡಿಸಿ ‘ವಿರೋಧಿಸಿದ್ದರು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ
MUST WATCH
ಹೊಸ ಸೇರ್ಪಡೆ
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ