ಗೋಪಾಲಯ್ಯಗಿಂತ ಮೊದಲು ಮಂತ್ರಿ ಆದವನು ನಾನು: ಡಿ ಕೆ ಶಿವಕುಮಾರ್ ವಾಗ್ದಾಳಿ
Team Udayavani, Apr 26, 2020, 11:57 AM IST
ಬೆಂಗಳೂರು: ಅಕ್ರಮ ಪಡಿತರ ಅಕ್ಕಿ ದಾಸ್ತಾನು ವಿಚಾರದಲ್ಲಿ ಡಿ ಕೆ ಶಿವಕುಮಾರ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಸಚಿವ ಗೋಪಾಲಯ್ಯ ಹೇಳಿದ್ದು, ಅದಕ್ಕೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಿ ಕೆ ಶಿವಕುಮಾರ್, ಸರ್ಕಾರ ಹೇಗೆ ನಡೆಯುತ್ತದೆ, ಸಿಸ್ಟಮ್ ಹೇಗೆ ಇರುತ್ತದೆ ಎಂದು ಗೊತ್ತಿದೆ. ನಾನು ಗೋಪಾಲಯ್ಯಗಿಂತ ಮೊದಲು ಮಂತ್ರಿ ಆದವನು. ಅವರ ನನ್ನ ನಡುವೆ ಈಗ ಬೇಡ. ಇವರು ಅಕ್ಕಿ ಇಡುವ ಮೊದಲೇ ಯಾಕೆ ಘೋಷಣೆ ಮಾಡಿಲ್ಲ. ನನಗೆ ಎಲ್ಲವೂ ಗೊತ್ತಿದೆ ಬಿಡಿ ಎಂದರು.
ಹರ್ಯಾಣದಿಂದ ರಾಜ್ಯಕ್ಕೆ ಬಂದ ಅಕ್ಕಿಯನ್ನು ಬಿಜೆಪಿ ನಾಯಕರೊಬ್ಬರು ತಮಿಳುನಾಡಿಗೆ ಮಾರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದರು. ಆದರೆ ಸಚಿವ ಗೋಪಾಲಯ್ಯ ಈ ಆರೋಪವನ್ನು ತಿರಸ್ಕರಿಸಿದ್ದರು.
ಮಂಡ್ಯದಲ್ಲಿ ಶಾಸಕ ಶ್ರೀಕಂಠೇ ಗೌಡ ದಾದಾಗಿರಿ ವಿಚಾರವಾಗಿ ಮಾತನಾಡಿದ ಅವರು, ಮಾಧ್ಯಮದವರು, ಸರಕಾರದವರು ಒಬ್ಬರಿಗೊಂದು ಮಾಡಬೇಡಿ. ಭರತ್ ಶೆಟ್ಟಿಗೊಂದು ನ್ಯಾಯ, ರೇಣುಕಾಚಾರ್ಯಗೆ ಒಂದು, ಶ್ರೀಕಂಠೆ ಗೌಡರಿಗೊಂದು ನ್ಯಾಯ ಬೇಡ. ಎಲ್ಲರಿಗೂ ಸರ್ಕಾರ ಒಂದೇ ರೀತಿ ನೋಡಲಿ. ಯಾರೇ ತಪ್ಪು ಮಾಡಿದ್ರೂ ಕ್ರಮ ಆಗಲಿ. ನಮ್ಮವರು, ಅವರ ಕಡೆಯವರು ಯಾರೇ ತಪ್ಪು ಮಾಡಿದರೂ ಕ್ರಮ ಆಗಲಿ ಎಂದು ಡಿಕೆಶಿವಕುಮಾರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…