ಮೇಕೆದಾಟು ಪಾದಯಾತ್ರೆ ವೇಳೆ ನೂಕು ನುಗ್ಗಲು; ಬಸವಳಿದ ಡಿಕೆ ಶಿವಕುಮಾರ್
Team Udayavani, Jan 10, 2022, 2:08 PM IST
ಬೆಂಗಳೂರು: ‘ನಮ್ಮ ನೀರು ನಮ್ಮ ಹಕ್ಕು’ ಪಾದಯಾತ್ರೆಯ ವೇಳೆ ನೂಕು ನುಗ್ಗಲು ಉಂಟಾಗಿ, ಕಾರ್ಯಕರ್ತರ ನೂಕಾಟ ತಪ್ಪಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹರಸಾಹಸ ಪಡೆಬೇಕಾಯಿತು.
ಪಾದಯಾತ್ರೆ ವೇಳೆ ಡಿ.ಕೆ ಶಿವಕುಮಾರ್ ಬಸವಳಿದರು. ಐದು ಕಿಮೀ ಪಾದಯಾತ್ರೆ ಸಾಗುತ್ತಿದ್ದಂತೆ ಸುಸ್ತಾದರು. ನಂತರ ಚಿಕ್ಕೇಗೌಡನದೊಡ್ಡಿ ಗ್ರಾಮದಲ್ಲಿ ವಿಶ್ರಾಂತಿ ಪಡೆದರು. ಮನೆ ಮುಂದೆ ಕುಳಿತು, ಕಾರ್ಯಕರ್ತರು ತಂದುಕೊಟ್ಟ ಬೋಂಡ ಸವಿಯುತ್ತಾ ವಿಶ್ರಾಂತಿ ಪಡೆದರು.
ಇದನ್ನೂ ಓದಿ:ಕಾಂಗ್ರೆಸ್ ನವರು ನೀರಿನಲ್ಲಿ ಕಿವಿ ಹಿಡಿದು ಕೂತು ತಪ್ಪಾಯ್ತೆಂದು ಕ್ಷಮೆ ಕೇಳಬೇಕು: ಆರಗ
ಪಾದಯಾತ್ರೆ ವೇಳೆ ಆರೋಗ್ಯ ತಪಾಸಣೆಗೆ ಸಜ್ಜಾಗಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಡಿ.ಕೆ ಶಿವಕುಮಾರ್ ಅವರ ಬಿಪಿ, ಶುಗರ್ ಪರೀಕ್ಷೆಗೆ ಬಂದರೂ, ಈಗಲೇ ಬೇಡ, ಮುಂದೆ ಮಾಡಿಸೋಣ ಎಂದು ಡಿಕೆಶಿ ಮತ್ತೆ ಪಾದಯಾತ್ರೆ ಆರಂಭಿಸಿದರು.
ಸರ್ಕಾರಕ್ಕೆ ಸವಾಲ್: ಪಾದಯಾತ್ರೆ ಕೈಗೊಂಡ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸರ್ಕಾರದ ನಡೆಯನ್ನು ಖಂಡಿಸಿದ ಡಿ ಕೆ ಶಿವಕುಮಾರ್, 30 ಜನರ ಮೇಲೆ ದೂರು ದಾಖಲಿಸಲಾಗಿದೆ. ಯಾಕೆ ಕೇವಲ 30 ಜನರು, ಪಾದಯಾತ್ರೆಗೆ ಬಂದಿರುವ ಸಾವಿರಾರು ಜನರ ಮೇಲೆ ದೂರು ದಾಖಲಿಸಿ ನೋಡೋಣ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನರು ಬಂದಿದ್ದಾರೆ. ಎಷ್ಟು ಉದ್ದ ಪಾದಯಾತ್ರೆ ಸಾಗುತ್ತಿದೆ ಎಂದು ನೀವೇ ನೋಡಿದ್ದೀರಿ. ನಮ್ಮ ಹೋರಾಟ ನಡೆಯುತ್ತಿರುವುದು ನೀರಿಗಾಗಿ, ಸರ್ಕಾರ ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…