ದಸರಾ ಪ್ರಯುಕ್ತ ವಿಶೇಷ ರೈಲು ಸೌಲಭ್ಯ
Team Udayavani, Sep 29, 2019, 3:00 AM IST
ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯವು ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ಮುಂಗಡ ಟಿಕೆಟ್ ಇಲ್ಲದ ಜನಸಾಧಾರಣ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಅ.8ರಂದು ರಾತ್ರಿ 9 ಗಂಟೆಗೆ ಮೈಸೂರಿನಿಂದ ಹೊರಡುವ ಮೈಸೂರು- ಚಾಮರಾಜನಗರ ಜನಸಾಧಾರಣ ವಿಶೇಷ (06207/06208) ರೈಲು ರಾತ್ರಿ 10:50ಕ್ಕೆ ಚಾಮರಾಜ ನಗರಕ್ಕೆ ಬರಲಿದೆ. ಚಾಮರಾಜನಗರದಿಂದ ಅ.8ರಂದು ರಾತ್ರಿ 11:10ಕ್ಕೆ ಪ್ರಯಾಣ ಬೆಳೆಸುವ ಚಾಮರಾಜನಗರ- ಮೈಸೂರು ಜನಸಾಧಾರಣ ವಿಶೇಷ (06208) ರೈಲು ಮೈಸೂರಿಗೆ ರಾತ್ರಿ 12:05ಕ್ಕೆ ಬಂದು ಸೇರಲಿದೆ.
ಮೈಸೂರಿನಿಂದ ಅ.8ರಂದು ರಾತ್ರಿ 10 ಗಂಟೆಗೆ ಹೊರಡುವ ಮೈಸೂರು-ಬೆಂಗಳೂರು ನಗರ ಜನಸಾಧಾರಣ ವಿಶೇಷ (06215) ರೈಲು ರಾತ್ರಿ 12:30ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ. ಬೆಂಗಳೂರು ನಗರದಿಂದ ಅ.9ರಂದು ರಾತ್ರಿ 1 ಗಂಟೆಗೆ ತೆರಳುವ ವಿಶೇಷ (06216) ರೈಲು ಅದೇ ದಿನ ನಸುಕಿನ 3:30ಕ್ಕೆ ಮೈಸೂರಿಗೆ ಬಂದು ಸೇರಲಿದೆ. ಅ.7ರಂದು ಧಾರವಾಡ-ಮೈಸೂರು ಎಕ್ಸ್ಪ್ರೆಸ್ (17302) ರೈಲಿಗೆ ಹಾಗೂ ಅ.8ರಂದು ಮೈಸೂರು-ಧಾರವಾಡ (17301) ರೈಲಿಗೆ ಮಾವಿನಕೆರೆ, ಅಕ್ಕಿಹೆಬ್ಟಾಳು, ಹೊಸ ಅಗ್ರಹಾರ, ಸಾಗರಕಟ್ಟೆ, ಬೆಳಗುಳ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗುವುದು.
ಅ.1ರಿಂದ 8ರವರೆಗೆ ಮೈಸೂರು-ತಾಳಗುಪ್ಪ (56276/56275) ಪ್ಯಾಸೆಂಜರ್ ರೈಲನ್ನು ಕೃಷ್ಣರಾಜಸಾಗರ, ಕಲ್ಲೂರ, ಯೆಡಹಳ್ಳಿ, ದೋರ್ನಹಳ್ಳಿ, ಹಂಪಾಪುರ, ಅರ್ಜುನಹಳ್ಳಿ ನಿಲ್ದಾಣಗಳಲ್ಲಿ; ಅ.1ರಿಂದ ಅ.8ರವರೆಗೆ ಮೈಸೂರು-ಶಿವಮೊಗ್ಗ ಟೌನ್ (56276/56275) ರೈಲಿಗೆ ಬೆಳಗುಳ, ಅರ್ಜುನಹಳ್ಳಿ, ಹೊಸ ಅಗ್ರಹಾರ, ಮಾವಿನಕೆರೆ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ಕಲ್ಪಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ವಿಶೇಷ ರೈಲು ಸೌಲಭ್ಯ: ದಸರಾ ಪ್ರಯುಕ್ತ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು ನೈಋತ್ಯ ರೈಲ್ವೆ ವಲಯ, ಸುವಿಧಾ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಅಕ್ಟೋಬರ್ 4ರಂದು ಹಾಗೂ 7ರಂದು ಸಂಜೆ 5 ಗಂಟೆಗೆ ಯಲಹಂಕದಿಂದ ಹೊರಡುವ ಯಲಹಂಕ-ಕಲಬುರಗಿ ಸುವಿಧಾ ವಿಶೇಷ (82661) ರೈಲು, ಮರುದಿನ ನಸುಕಿನ 4:20ಕ್ಕೆ ಕಲಬುರಗಿ ತಲುಪಲಿದೆ.
ಅ.5 ಹಾಗೂ 8ರಂದು ರಾತ್ರಿ 8:30ಕ್ಕೆ ಕಲಬುರಗಿಯಿಂದ ಪ್ರಯಾಣ ಬೆಳೆಸುವ ಸುವಿಧಾ ವಿಶೇಷ (82662) ರೈಲು, ಮರುದಿನ ಬೆಳಗ್ಗೆ 8:40ಕ್ಕೆ ಯಲಹಂಕ ತಲುಪಲಿದೆ. ಅ.7ರಂದು ರಾತ್ರಿ 11:55ಕ್ಕೆ ಬೆಂಗಳೂರು ನಗರದಿಂದ ಹೊರಡುವ ಬೆಂಗಳೂರು ನಗರ-ಕಾರವಾರ ಸುವಿಧಾ ವಿಶೇಷ (82665) ರೈಲು, ಮರುದಿನ ಮಧ್ಯಾಹ್ನ 3:00 ಗಂಟೆಗೆ ಕಾರವಾರ ತಲುಪಲಿದೆ ಎಂದು ನೈಋತ್ಯ ರೈಲ್ವೆ ವಲಯ ಕಚೇರಿಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ