ವೀಕ್ಲಿ ಎಕ್ಸ್ಪ್ರೆಸ್ ರೈಲು ಓಡಿಸಲು ನಿರ್ಧಾರ
Team Udayavani, Apr 28, 2019, 3:00 AM IST
ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಕೃಷ್ಣರಾಜಪುರಂ-ಕೋಚುವೇಲಿ ಮಧ್ಯೆ ಏ.29ರಿಂದ ಜುಲೈ 1ರಂದು ವಿಶೇಷ ದರದ ವೀಕ್ಲಿ ಎಕ್ಸ್ಪ್ರೆಸ್ ರೈಲು (06027) ಓಡಿಸಲು ನಿರ್ಧರಿಸಲಾಗಿದೆ. ರೈಲು ಪ್ರತಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಕೃಷ್ಣರಾಜಪುರಂನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6 ಗಂಟೆಗೆ ಕೋಚುವೇಲಿಗೆ ಬಂದು ಸೇರಲಿದೆ.
ಅದೇ ರೀತಿ, ಕೋಚುವೇಲಿ-ಕೃಷ್ಣರಾಜಪುರಂ ಮಧ್ಯೆ ಏ.28ರಿಂದ ಜೂನ್ 30ರವರೆಗೆ ಸುವಿಧಾ ವೀಕ್ಲಿ ಎಕ್ಸ್ಪ್ರೆಸ್ (82644) ರೈಲು ಓಡಿಸಲು ನಿರ್ಧರಿಸಲಾಗಿದೆ.ಕೋಚುವೇಲಿಯಿಂದ ಭಾನುವಾರ ಸಂಜೆ 5 ಗಂಟೆಗೆ ಹೊರಡುವ ರೈಲು, ಮರುದಿನ ಬೆಳಗ್ಗೆ 8.45ಕ್ಕೆ ಕೃಷ್ಣರಾಜಪುರಂ ನಿಲ್ದಾಣಕ್ಕೆ ಆಗಮಿಸಲಿದೆ.
ಹುಬ್ಬಳ್ಳಿ ಡಿವಿಜನ್ನ ಬೆಳಗಾವಿ-ಮೀರಜ್ ಸೆಕ್ಷನ್ನ ರಾಯಬಾಗ-ಚಿಂಚಿ ನಿಲ್ದಾಣಗಳ ಮಧ್ಯದಲ್ಲಿ ರೈಲು ಹಳಿ ಕಾಮಗಾರಿ ಪ್ರಯುಕ್ತ ಲೈನ್ ಬ್ಲಾಕೇಜ್ಗಾಗಿ ಏ.29ರಿಂದ ಮೇ 3ರವರೆಗೆ ಮೀರಜ್-ಹುಬ್ಬಳ್ಳಿ ಪ್ಯಾಸೆಂಜರ್ (51419) ರೈಲು ಮೀರಜ್ನಿಂದ 120 ನಿಮಿಷ ವಿಳಂಬವಾಗಿ ಪ್ರಯಾಣ ಆರಂಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.