ಜೈನರ ಭಾವನೆಗಳಿಗೆ ಧಕ್ಕೆ: ಸಚಿವ ಹೆಗಡೆ ಭಾವ ಚಿತ್ರಕ್ಕೆ ಚಪ್ಪಲಿ ಸೇವೆ
Team Udayavani, Apr 30, 2018, 3:22 PM IST
ಕಿತ್ತೂರು: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಪ್ರತಿಕೃತಿಗೆ ಚಪ್ಪಲಿ ಸೇವೆ ಮಾಡಿ ಜೈನ ಸಮುದಾಯದ ಕೆಲವರು ಸೋಮವಾರ ಆಕ್ರೋಶ ಹೊರ ಹಾಕಿದ್ದಾರೆ.
ಅನಂತ್ ಕುಮಾರ್ ಅವರ ಹೇಳಿಕೆ ಖಂಡಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಜೈನ ಸಮುದಾಯದ ಕೆಲವರು ಪ್ರತಿಭಟನೆ ನಡೆಸಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಿತ್ತೂರು ತಹಶೀಲಾœರ್ ಅವರಿಗೆ ದೂರು ನೀಡಿದ್ದಾರೆ.
ಬಿಜೆಪಿ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿಗೆ ಈಗ ಹಿಂದೂ ಧರ್ಮ ಅಂತ ಒಂದಿದೆ ಎಂದು ನೆನನಪಾಗಿದೆ . ಆ ಮನುಷ್ಯನಿಗೆ ದೇವಸ್ಥಾನಕ್ಕೆ ಹೊದ್ರೆ ತೀರ್ಥ ಕುಡಿಯುವುದು ಹೇಗಂತಾನೆ ಗೊತ್ತಿಲ್ಲ. ದೇವಸ್ಥಾನಕ್ಕೆ ಹೊದ್ರೆ ಕಾವಿ ಹಾಕೊಳ್ತಾನೆ. ಮಠಕ್ಕೆ ಹೊದ್ರೆ ರುದ್ರಾಕ್ಷಿ ಹಾಕೊಳ್ತಾನೆ. ಮಸೀದಿಗೆ ಹೊದ್ರೆ ಹಕ್ಕಿ ಪುಕ್ಕ ಹಾಕೊಳ್ತಾನೆ. ಚರ್ಚ್ಗೆ ಹೊದ್ರೆ ಶಿಲುಬೆ ಹಾಕೊಳ್ತಾನೆ.ಎಲ್ಲಾ ನಾಟಕ. ನಾನು ಹೇಳೆ¤àನೆ ರಾಹುಲ್ ಗಾಂಧಿ ಅವರು ಒಮ್ಮೆ ಅತೀ ದೊಡ್ಡ ಶ್ರದ್ಧಾ ಕೇಂದ್ರ ಶ್ರವಣಬೆಳಗೊಳಕ್ಕೂ ಹೋಗಲಿ ಎಂದು ವ್ಯಂಗ್ಯವಾಡಿದ್ದರು.