ದುಡಿದ ಅನ್ನವನ್ನು ಬೇಯಿಸಿ ತಿನ್ನಲೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ: ದಿನೇಶ್ ಗುಂಡೂರಾವ್
Team Udayavani, Oct 7, 2021, 5:00 PM IST
ಬೆಂಗಳೂರು: ಎಲ್ ಪಿಜಿ ದರ ಮತ್ತೆ 15 ರೂ ಹೆಚ್ಚಳವಾಗಿ ಸಾರ್ವತ್ರಿಕ ಏರಿಕೆ ಕಂಡಿದೆ. ಇಂತಹ ದುಬಾರಿ ದುನಿಯಾದಲ್ಲಿ ಮೋದಿಯವರ ಶ್ರೀಮಂತ ಸ್ನೇಹಿತರು,’ಕೋಟಿ ರವಿ’ ಎಂಬ ಬಿರುದಾಂಕಿತರು ಮಾತ್ರ ಜೀವನ ನಡೆಸಬಹುದಷ್ಟೆ. ಆದರೆ ಜನಸಾಮಾನ್ಯ, ದುಡಿದ ಅನ್ನವನ್ನು ಬೇಯಿಸಿ ತಿನ್ನಲೂ ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಇದೆಂತಹ ಒಳ್ಳೆಯ ದಿನಗಳು ಬಿಜೆಪಿ ನಾಯಕರೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಯುಪಿಎ ಸರ್ಕಾರವಿದ್ದಾಗ ಬಡವರ ಎಲ್ ಪಿಜಿ ಗೆ ಸಬ್ಸಿಡಿಯಾದರೂ ಸಿಗುತಿತ್ತು. ಆದರೆ ಈಗಿನ ಕೇಂದ್ರ ಸರ್ಕಾರ ಆ ಸಬ್ಸಿಡಿಯನ್ನು ಕೂಡ ರದ್ದು ಮಾಡಿದೆ. ಈಗ ಪ್ರತಿ ಸಿಲಿಂಡರ್ಗೆ 1024 ಕೋಟಿ ರೂ. ಆದಾಯವಿರುವ ಅದಾನಿ ಕೂಡ 902 ರೂ. ಕೊಡಬೇಕು, ಮೈಮುರಿದು ದುಡಿದರೂ ನೂರು ರೂಪಾಯಿ ಗಳಿಸಲಾಗದ ಬಡವ ಕೂಡ 902 ರೂ. ಕೊಡಬೇಕು. ಬಡವ ಅದಾನಿಯಂತೆ ಬದುಕಲು ಸಾಧ್ಯವೇ? ಎಂದಿದ್ದಾರೆ.
ಇದನ್ನೂ ಓದಿ:ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಪಟ್ಟಿ ಬಿಡುಗಡೆ: ಮನೇಕಾ, ವರುಣ್ ಗಾಂಧಿಗೆ ಕೊಕ್
ಕೋಟಿ ಕುಳಗಳೆ ತುಂಬಿರುವ ಬಿಜೆಪಿಯವರಿಗೆ ಬೆಲೆಯೇರಿಕೆಯ ಬಿಸಿ ತಟ್ಟದಿರಬಹುದು. ಆದರೆ ಹೊಟ್ಟೆ ಬಟ್ಟೆ ಕಟ್ಟಿ ಸಂಸಾರ ನಡೆಸುವವನಿಗೆ ಬೆಲೆಯೇರಿಕೆಯ ಕಷ್ಟ ಏನೆಂದು ಗೊತ್ತಿದೆ. ಈ ಸರ್ಕಾರದ ಹಣದಾಹಕ್ಕೆ ಈಗಾಗಲೇ ಬಡವನ ಬದುಕು ನಾಶವಾಗಿ ಹೋಗಿದೆ. ಈ ಸರ್ಕಾರಕ್ಕೆ ಕಾರ್ಪೊರೇಟ್ ಧಣಿಗಳ ಮೇಲಿರುವ ಪ್ರೀತಿ, ಅನುಕಂಪ ಹಾಗೂ ಮಮತೆ ಬಡವರ ಮೇಲೆ ಯಾಕಿಲ್ಲ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!