ಪದ್ಮಶ್ರೀ ಸುಕ್ರಿ ಬೊಮ್ಮಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್
Team Udayavani, May 13, 2022, 2:14 PM IST
ಮಂಗಳೂರು: ಪದ್ಮಶ್ರೀ ಹಾಲಕ್ಕಿ ಜಾನಪದ ಹಾಡುಗಾರ್ತಿ, ಪರಿಸರ ಮತ್ತು ಸಾಮಾಜಿಕ ಹೋರಾಟಗಾರ್ತಿ ಸುಕ್ರಿ ಬೊಮ್ಮ ಗೌಡರವರು ಗುಣಮುಖರಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯಿಂದ ಶುಕ್ರವಾರ ಡಿಸ್ಚಾರ್ಜ್ ಆಗಿ ಅಂಕೋಲಾ ಕಡೆಗೆ ಹೊರಟಿದ್ದಾರೆ.
86 ವರ್ಷದ ಸುಕ್ರಜ್ಜಿ ಕಳೆದ 4 ತಿಂಗಳಿನಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಭಾನುವಾರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ:ಸುರತ್ಕಲ್ ಬೀಚ್ನಲ್ಲಿ ಭಾರಿ ಪ್ರಮಾಣದ ತೈಲ ಜಿಡ್ಡು ಪತ್ತೆ
ಸುಕ್ರಜ್ಜಿ ಗುಣಮುಖರಾಗಿದ್ದು, ಹಿಂದಿನಂತೆಯೇ ಉತ್ಸಾಹ, ಲವಲವಿಕೆಯಿಂದ ಇದ್ದು, ಅವರನ್ನು ಅಂಕೋಲಕ್ಕೆ ಕರೆದುಕೊಂಡು ಹೋಗಲಾಗಿದೆ.
ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ನರಸಿಂಹ ಪೈ, ಪದ್ಮನಾಭ ಕಾಮತ್, ರಾಕೇಶ್ ಮತ್ತು ಸಿಬ್ಬಂದಿಗಳು ಸುಕ್ರಜ್ಜಿಗೆ ಚಿಕಿತ್ಸೆ ನೀಡಿದ್ದಾರೆ.