ಶಾಸಕರಿಗೆ ಅನರ್ಹತೆ “ಗುಮ್ಮ’
Team Udayavani, Jul 13, 2019, 3:00 AM IST
ಬೆಂಗಳೂರು: ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಶಾಸಕರು ವಿಪ್ ಉಲ್ಲಂ ಸಿದರೆ ತತ್ಕ್ಷಣ ಅನರ್ಹಗೊಳ್ಳುತ್ತಾರೆ. ಆಗ ಉಪ ಚುನಾವಣೆಗೆ ಸ್ಪರ್ಧೆ ಮಾಡಲಾಗಲ್ಲ, ಸಚಿವರಾಗಲೂ ಸಾಧ್ಯವಿಲ್ಲ. ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲ ಎಂಬ ಆತಂಕದ “ಅಸ್ತ್ರ’ ಸರ್ಕಾರವನ್ನು ಕಾಪಾಡಲಿದೆ ಎಂಬುದು ಕಾಂಗ್ರೆಸ್ ನಾಯಕರ ಅಭಿಪ್ರಾಯ.
ಶುಕ್ರವಾರ ವಿಧಾನಸಭೆ ಅಧಿವೇಶನ ಸಂದರ್ಭದಲ್ಲಿ ಮೊಗಸಾಲೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿ ಹಲವರು ಚರ್ಚಿಸುತ್ತಿದ್ದರು. ಈ ಸಂದರ್ಭದಲ್ಲಿ ವಿಪ್ ಉಲ್ಲಂ ಸಿ ಅನರ್ಹಗೊಳ್ಳಲು ಯಾವುದೇ ಶಾಸಕರು ಸಿದ್ಧರಿಲ್ಲ. ವಿಪ್ ಕೊಟ್ಟರೆ ಕಳೆದ ಬಾರಿ ಬಂದಂತೆ ಬಂದೇ ಬರ್ತಾರೆ ಎಂದು ವಾದ ಮಂಡಿಸುತ್ತಿದ್ದರು.
ಬಿಜೆಪಿಯ ಸಂಪರ್ಕದಲ್ಲಿದ್ದಾರೆಂಬ ಅನುಮಾನ ಇರುವ ಶಾಸಕರಿಗೆ ಇದೇ ವಿಚಾರ ತಿಳಿಸಿ ಅನರ್ಹತೆಯ ಆತಂಕ ಉಂಟು ಮಾಡುವಲ್ಲಿ ಕೆಲವು ನಾಯಕರು ನಿರತರಾಗಿದ್ದರು. ಈ ಮಧ್ಯೆ, ಮುಂಬೈಗೆ ತೆರಳಿರುವ ಶಾಸಕರ ಕುಟುಂಬದವರಿಗೂ ಇದೇ ವಿಚಾರ ಹೇಳಿ ಮನವೊಲಿಸಿ ವಾಪಸ್ ಕರೆಸುವ ಒತ್ತಡ ಹಾಕಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ