ಮಳೆಗಾಲದಲ್ಲಿ ಬರ ಅಧ್ಯಯನ: ಎಂಬಿಪಿ
Team Udayavani, Jun 10, 2019, 3:03 AM IST
ವಿಜಯಪುರ: ರಾಜ್ಯದ ಜನರು ಮಳೆ ಇಲ್ಲದೇ ಭೀಕರ ಬರ ಪರಿಸ್ಥಿತಿಯಲ್ಲಿ ನರಳುತ್ತಿದ್ದಾಗ “ಆಪರೇಷನ್ ಕಮಲ’ ಮಾಡಲು ಮುಂದಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮಳೆಗಾಲದಲ್ಲಿ ರಾಜ್ಯದ ಜನರು ನೆನಪಾಗಿದ್ದಾರೆ. ಮಳೆಗಾಲದಲ್ಲಿ ಬರ ಅಧ್ಯಯನಕ್ಕೆ ಹೊರಟಿರುವುದು ರಾಜಕೀಯ ನಾಟಕ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಟೀಕಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಹಪಾಹಪಿಸುತ್ತಿರುವ ಯಡಿಯೂರಪ್ಪ ಅವರಿಗೆ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕತೆಯಿಲ್ಲ. ಆದರೆ, ರಾಜಕೀಯ ಕಾರಣಕ್ಕೆ ಮಳೆಗಾಲದಲ್ಲಿ ಬರ ಅಧ್ಯಯನ ನಡೆಸಿ, ಜನತೆಯ ಕಣ್ಣಿಗೆ ಮಣ್ಣೆರಚಲು ಹೊರಟ್ಟಿದ್ದಾರೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.