ಕುಡುಕನ ರೋಷಾವೇಶ; ಟ್ರಾಫಿಕ್ ಪೊಲೀಸರ ಮೇಲೆ ದಾಳಿ
Team Udayavani, Oct 10, 2018, 3:52 PM IST
ದಾವಣಗೆರೆ: ಇಲ್ಲಿನ ಸದಡಿ ರಸ್ತೆ ಬಳಿ ಕುಡುಕನೊಬ್ಬ ಟ್ರಾಫಿಕ್ ಪೊಲೀಸರು ತಪಾಸಣೆ ನಡೆಸುತ್ತಿದ್ದ ವೇಳೆ ರೋಷಾವೇಶ ತೋರಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದಾನೆ.
ಬುಧವಾರ ಮಧ್ಯಾಹ್ನ ಘಟನೆ ನಡೆದಿದ್ದು, ಬೈಕ್ ಅಡ್ಡಗಟ್ಟಿದಾಗ ಮಧ್ಯಾಹ್ನ ಯಾಕೆ ತಪಾಸಣೆ ಮಾಡುತ್ತೀರಿ ಎಂದು ಕಿರಿಕ್ ತೆಗೆದ ಕುಡುಕ ರುದ್ರೇಶ್ ಎಂಬಾತ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಪಕ್ಕದಲ್ಲಿದ್ದ ಇಟ್ಟಿಗೆಯನ್ನೂ ಪೊಲೀಸರ ಮೇಲೆ ಎಸೆದಿದ್ದಾನೆ. ಕುಸ್ತಿ ಪಟುವಿನಂತೆ ಓರ್ವ ಪೊಲೀಸ್ ಸಿಬಂದಿಯನ್ನು ನೆಲಕ್ಕೆ ಕೆಡವಿದ್ದಾನೆ.
ಎಎಸ್ಐ ಅಂಜಿನಪ್ಪ ಮತ್ತು ಸಿಬಂದಿಗಳಾದ ಸಿದ್ದೇಶ್, ನಾರಾಯಣರಾಜ್ ಅರಸು ಅವರ ಮೇಲೆ ದಾಳಿ ನಡೆಸಿದ್ದಾನೆ. ನಾರಾಯಣ ರಾಜು ಅವರ ಹಣೆಗೆ ಬಲವಾದ ಗಾಯವಾಗಿದೆ.
ದಾಳಿ ನಡೆಸಿದ ರುದ್ರೇಶ್ ವಕೀಲ ಎಂದು ಹೇಳಲಾಗಿದೆ. ಆತನನ್ನು ಬಂಧಿಸಿರುವ ದಾವಣಗೆರೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ