ವಾರಾಹಿ ಜಲಾನಯನ ಪ್ರದೇಶದಲ್ಲಿ ಮತ್ತೆ ಭೂಕಂಪ
Team Udayavani, Feb 27, 2019, 12:32 AM IST
ಹೊಸನಗರ/ ತೀರ್ಥಹಳ್ಳಿ: ತಾಲೂಕಿನ ವಾರಾಹಿ ಹಿನ್ನೀರು ಪ್ರದೇಶ ಹಾಗೂ ಹೊಸನಗರ ತಾಲೂಕಿನ ಮಾಣಿ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ಮಂಗಳವಾರ ಮುಂಜಾನೆ 2.25ಕ್ಕೆ ಲಘು ಭೂಕಂಪ ಸಂಭವಿಸಿದೆ.
ಫೆಬ್ರವರಿಯಲ್ಲಿ ಮೂರನೇ ಬಾರಿಗೆ ಈ ಭಾಗದಲ್ಲಿ ಭೂಮಿ ಕಂಪಿಸಿದೆ. ಆದರೆ ರಿಕ್ಟರ್ ಮಾಪಕದಲ್ಲಿ ಈ ಬಗ್ಗೆ ಮಾಹಿತಿ ದಾಖಲಾಗಿಲ್ಲ. ಆಗುಂಬೆ ಹೋಬಳಿ ವ್ಯಾಪ್ತಿಯ ಮೇಗರವಳ್ಳಿ ಸಮೀಪದ ಹನಸ, ಮಲ್ಲಕ್ಕಿ, ಹುರುಳಿ, ಗಾರ್ಡರಗದ್ದೆ ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಆ ಭಾಗದ ಗ್ರಾಮಸ್ಥರು ತಿಳಿಸಿದ್ದಾರೆ.
ಮಾಣಿ ಜಲಾನಯನ ಪ್ರದೇಶದ ಯಡೂರು, ಸುಳಗೋಡು, ಖೈರುಗುಂದಾ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 2 ಸೆಕೆಂಡ್ಗಳ ಕಾಲ ಲಘು ಭೂಕಂಪ ಆಗಿದೆ ಎಂದು ಓಣಿಮನೆ ಅಶೋಕ ಎಂಬುವವರು ತಿಳಿಸಿದ್ದಾರೆ. ವಾರಾಹಿ ಹಿನ್ನೀರು ಪ್ರದೇಶಗಳಾದ ಈ ಗ್ರಾಮಗಳಲ್ಲಿ ಫೆ.3ರಂದು ಮುಂಜಾನೆ ಭೂಕಂಪನವಾಗಿತ್ತು. ನಂತರ ಫೆ.4ರಂದು ಮತ್ತೂಮ್ಮೆ ಭೂಮಿ ಕಂಪಿಸಿತ್ತು. ಈಗ ಮತ್ತೂಮ್ಮೆ ಭೂಮಿ ಕಂಪಿಸಿದೆ.
ಮಂಗಳವಾರ ಮುಂಜಾನೆ ಈ ಭಾಗದಲ್ಲಿ ಸಂಭವಿಸಿದ ಭೂ ಕಂಪನದ ಬಗ್ಗೆ ತಾಲೂಕಿನ ವಿಠuಲ ನಗರದ ರಿಕ್ಟರ್ ಮಾಪಕ ಕೇಂದ್ರದಲ್ಲಿ ಯಾವುದೇ ಮಾಹಿತಿ ದಾಖಲಾಗಿಲ್ಲ ಎಂದು ತಾಲೂಕು ಆಡಳಿತ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ