ಚುನಾವಣಾ ರಾಜಕಾರಣ ಸಾಕು ಅನ್ನಿಸಿದೆ;ದಲಿತ ಸಿಎಂ ಆದ್ರೆ ತಕರಾರಿಲ್ಲ!
Team Udayavani, May 13, 2018, 11:37 AM IST
ಮೈಸೂರು:ಮತದಾನ ನಡೆದು ಫಲಿತಾಂಶಕ್ಕಾಗಿ ಎದುರು ನೋಡುತ್ತಿರುವ ವೇಳೆ ‘ನನಗೆ ಚುನಾವಣಾ ರಾಜಕೀಯ ಸಾಕು ಅನ್ನಿಸಿದೆ. ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ನಾನು ಕಳೆದ ಬಾರಿಯೇ ಚುನಾವಣೆಗೆ ಸ್ಫರ್ಧಿಸಬಾರದು ಎಂದು ಮಾನಸಿಕವಾಗಿ ನಿರ್ಧಾರ ತಳೆದಿದ್ದೆ . ಆದರೆ ಮುಖ್ಯಮಂತ್ರಿಯಾಗಿ ಪಲಾಯನವಾದ ಮಾಡಬಾರದು ಎಂದು ಮತ್ತೆ ಸ್ಫರ್ಧಿಸಿದೆ’ ಎಂದರು.
‘ನನ್ನ ಕೊನೆಯ ವರೆಗೆ ಕೋಮುವಾದಿಗಳು, ಜಾತಿವಾದಿಗಳ ವಿರುದ್ದ ಹೋರಾಟ ಮುಂದುವರಿಸುತ್ತೇನೆ’ ಎಂದರು.
‘ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿಯಿಲ್ಲ. ಕರ್ನಾಟಕ್ಕೆ ಮಾತ್ರ ನನ್ನ ರಾಜಕೀಯ ಸೀಮಿತ. ದೆಹಲಿ ಕಡೆ ತಲೆನೇ ಹಾಕುವುದಿಲ್ಲ’ ಎಂದರು.
ದಲಿತ ಸಿಎಂ ಓಕೆ !
‘ನಾವು 120 ಕ್ಕೂ ಹೆಚ್ಚು ಸ್ಥಾನಗೆದ್ದು ಅಧಿಕಾರಕ್ಕೆ ಬರುತ್ತೇವೆ ಎಂದು ನನಗೆ ಖಚಿತ ವಿಶ್ವಾಸವಿದೆ . ದುಡ್ಡಿನಿಂದಲೇ ಎಲ್ಲಾ ಗೆಲ್ಲುವುದಕ್ಕೆ ಸಾಧ್ಯವಿಲ್ಲ’ ಎಂದರು.
‘ಹೈಕಮಾಂಡ್ ದಲಿತ ಸಿಎಂ ಮಾಡಬೇಕು ಅಂದರೆ ನನ್ನದೇನು ತಕರಾರು ಇಲ್ಲ. ನಾನು ಯಾರ ವಿರುದ್ಧವೂ ಇಲ್ಲ’ ಎಂದರು.
ನಾನು ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಿದ್ದೇನೆ.ಅಧಿಕಾರ ನಡೆಸಲು ಸಹಕರಿಸಿದ ಶಾಸಕರು ಅಧಿಕಾರಿಗಳು , ರಾಜ್ಯದ ಜನರಿಗೆ ಧನ್ಯವಾದಗಳು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು