ರೈಲ್ವೆ ಕಂಬಿಗೆ ಸಿಲುಕಿ ಕಾಡಾನೆ ಸಾವು
Team Udayavani, Dec 16, 2018, 10:00 AM IST
ಹುಣಸೂರು: ನಾಗರಹೊಳೆ ಉದ್ಯಾನದಿಂದ ಹೊರ ಬಂದಿದ್ದ ಕಾಡಾನೆಗಳ ಗುಂಪಿನಲ್ಲಿದ್ದ ಸಲಗವೊಂದು ಗುಂಪಿನಿಂದ ಬೇರ್ಪಟ್ಟು, ಮರಳಿ ಉದ್ಯಾನಕ್ಕೆ ತೆರಳಲು ರೈಲ್ವೆ ಕಂಬಿಯ ತಡೆಗೋಡೆ ದಾಟಲು ಹೋಗಿ ಸಿಕ್ಕಿ ಬಿದ್ದಿದ್ದು, ಕೊನೆಗೆ ಕಂಬಿಯ ಮೇಲೆಯೇ ಪ್ರಾಣ ತ್ಯಜಿಸಿದ ಘಟನೆ ವೀರನಹೊಸಹಳ್ಳಿಯ ಅರಣ್ಯ ಸಿಬ್ಬಂದಿಗಳ ವಸತಿಗೃಹದ ಬಳಿ ಸಂಭವಿಸಿದೆ.
ಸುಮಾರು 41-42 ವರ್ಷದ ಈ ಸಲಗ, ಇತರ ಎರಡು ಆನೆಗಳೊಂದಿಗೆ ಗುರುವಾರ ರಾತ್ರಿ ಉದ್ಯಾನದಿಂದ ಹೊರದಾಟಿ ಬಂದು ಕೋಣನಹೊಸಹಳ್ಳಿ, ಕೊಳುವಿಗೆ, ಮುದಗನೂರು ಬಳಿ ಅಡ್ಡಾಡುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿಗಳು
ಗಣೇಶ, ಬಲರಾಮ ಆನೆಗಳ ನೆರವಿನಿಂದ ಶುಕ್ರವಾರ ಬೆಳಗ್ಗೆ ಎರಡು ಕಾಡಾನೆಗಳನ್ನು ಕೊಳವಿಗೆಯ ರಾಮಲಿಂಗೇಶ್ವರ ದೇವಸ್ಥಾನದ ಬಳಿಯ ಗೇಟ್ನಿಂದ ಒಳ ಸೇರಿಸಿದ್ದರು. ಆದರೆ, ಈ ಸಲಗ ಗಾಬರಿಗೊಂಡು ಗುಂಪಿನಿಂದ ಬೇರ್ಪಟ್ಟು, ಕೋಣನಹೊಸಹಳ್ಳಿ ಬಳಿ ನೀಲಗಿರಿ ತೋಪಿನತ್ತ ಓಡಿತ್ತು. ಎಷ್ಟೇ ಪ್ರಯತ್ನಪಟ್ಟರೂ ಸಾಕಾನೆಗಳಿಗೂ ಹೆದರದೆ ಸೆಡ್ಡು ಹೊಡೆದಿತ್ತು. ಕೊನೆಗೆ ರಾತ್ರಿ ವೇಳೆ ಕಾಡಿಗಟ್ಟಲು ಯತ್ನಿಸಿದಾಗಲೂ ಸಾಧ್ಯವಾಗಿರಲಿಲ್ಲ.
ಆದರೆ, ಶನಿವಾರ ಮುಂಜಾನೆ ವೇಳೆ ಈ ಸಲಗ ವೀರನಹೊಸಹಳ್ಳಿವರೆಗೆ ಬೇಲಿ ಅಂಚಿನಲ್ಲೇ ನಡೆದುಕೊಂಡು ಬಂದು, ಉದ್ಯಾನ ಪ್ರವೇಶಿಸಲು ರೈಲ್ವೆ ಕಂಬಿ ಏರಿ, ವಿಫಲ ಯತ್ನ ನಡೆಸಿತು. ಕಂಬಿಯ ಮೇಲೆ ಹೊಟ್ಟೆ ಸಿಲುಕಿ ನೆಲಕ್ಕೆ ಕಾಲೂರಲಾಗದೆ, ಘೀಳಿಡಲೂ ಆಗದೆ, ಆನೆ ಶ್ವಾಸಕಟ್ಟಿ ಇಹಲೋಕ ತ್ಯಜಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎ.ಸಿ.ಎಫ್.ಪ್ರಸನ್ನಕುಮಾರ್, ಆರ್. ಎಫ್.ಓ.ಸಂದೀಪ್, ಗ್ರಾಮಸ್ಥರ ಸಹಕಾರದಿಂದ ಆನೆಗೆ ಹಗ್ಗ ಕಟ್ಟಿ ಕೆಳಕ್ಕಿಳಿಸಿದರು. ನಾಗರಹೊಳೆ ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಶವಪರೀಕ್ಷೆ ನಡೆಸಿದರು. ಈ ಮಧ್ಯೆ, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ಗ್ರಾಮಸ್ಥರು, ಆನೆಯ ಸಾವಿಗೆ ಮಮ್ಮಲ ಮರುಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?