ಸಕಲೇಶಪುರ:ಕೆಸರಲ್ಲಿ ಹೂತು ಹೋಗಿರುವ ಹೆಣ್ಣಾನೆ, ಪಕ್ಕದಲ್ಲಿ ಮರಿ
Team Udayavani, Nov 27, 2018, 1:44 PM IST
ಸಕಲೇಶಪುರ: ಕರಗಡವಳ್ಳಿಯಲ್ಲಿ ಕಾಡು ಹೆಣ್ಣಾನೆಯೊಂದು ಕೆಸರಲ್ಲಿ ಹೂತು ಹೋಗಿದ್ದು ಮೇಲಕ್ಕೆ ಬರಲಾರದೆ ಪರದಾಡುತ್ತಿದೆ. ಪಕ್ಕದಲ್ಲೇ ಆನೆಯ ಮರಿ ಇದ್ದು ಆರ್ತನಾದ ಮಾಡುತ್ತಿದೆ.
ಅರಣ್ಯ ಇಲಾಖೆಯ ಸಿಬಂದಿಗಳು ಹಿಟಾಚಿಯೊಂದಿಗೆ ತೆರಳಿ ಆನೆಯನ್ನು ಮೇಲಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ.
ಎತ್ತಿನ ಹೊಳೆ ಯೋಜನೆಗಾಗಿ ತೆಗೆದ ಕಾಲುವೆಯ ಮಣ್ಣಿನಲ್ಲಿ ಆನೆ ಸಂಪೂರ್ಣವಾಗಿ ಹುಗಿದು ಹೋಗಿದೆ. ನಾಲ್ಕು ಕಾಲುಗಳು ಹೂತು ಹೋಗಿದ್ದು ಮೇಲಕ್ಕೆ ಬರುವುದು ಕಷ್ಟಸಾಧ್ಯವಾಗಿ ಒದ್ದಾಡುತ್ತಿದೆ. ಒಂದು ಕಾಲು ಮುರಿದು ಹೋಗಿರುವ ಬಗ್ಗೆಯೂ ಶಂಕೆ ವ್ಯಕ್ತ ಪಡಿಸಲಾಗಿದೆ.
ಪಕ್ಕದಲ್ಲಿರುವ ಮರಿ ಆನೆ ತಾಯಿಯನ್ನು ಬಿಟ್ಟು ಕದಲುತ್ತಿಲ್ಲ. ಈ ದೃಶ್ಯ ಕಣ್ಣುಗಳು ತೇವವಾಗಿಸುವಂತಿದೆ. ಎರಡೂ ಆನೆಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ಮರಿ ಆನೆ ಸೊಪ್ಪನ್ನು ತಿನ್ನುತ್ತಿದೆ ಆದರೆ ತಾಯಿ ಏನನ್ನೂ ತಿನ್ನುತ್ತಿಲ್ಲ.
ರಕ್ಷಣಾ ಕಾರ್ಯ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK