ಅಂಗಾರ, ಸುನೀಲ್ ಕುಮಾರ್ ಗೆ ಸಚಿವ ಸ್ಥಾನ : ವರಿಷ್ಠರ ತೀರ್ಮಾನವೇ ಅಂತಿಮ : ಈಶ್ವರಪ್ಪ
Team Udayavani, Jan 11, 2021, 8:30 PM IST
ಬಂಟ್ವಾಳ : ಮೊದಲು ಅಲ್ಲಿಂದ ಬಂದ ಶಾಸಕರಿಗೆ ಸಚಿವ ಸ್ಥಾನ ಕೊಟ್ಟು ಋಣ ತೀರಿಸಬೇಕಿದೆ.ಹೀಗಾಗಿ ಎಲ್ಲ ಲೆಕ್ಕಾಚಾರ ಮಾಡಿ ವರಿಷ್ಠರು ನಿರ್ಧಾರ ಮಾಡುತ್ತಾರೆ ಸುಳ್ಯದ ಶಾಸಕ ಅಂಗಾರ ಅನ್ನೋ ವ್ಯಕ್ತಿ ಮತ್ತೊಬ್ಬ ಬಸನಗೌಡ ಯತ್ನಾಳ್ ಆಗಿಲ್ಲ. ಈ ವಿಚಾರದ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬಂಟ್ವಾಳದಲ್ಲಿ ಬಿಜೆಪಿ ಜನಸೇವಕ ಸಮಾವೇಶದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಗ್ರಾಮೀಣಾಭಿವೃದ್ಧಿ ಸಚಿವ ಕೆ ಅಂಗಾರ, ಸುನೀಲ್ ಕುಮಾರ್ ಗೆ ಸಚಿವ ಸ್ಥಾನ ಕೊಡುವುದರ ಬಗ್ಗೆ ಎಲ್ಲ ಲೆಕ್ಕಾಚಾರ ಮಾಡಿ ವರಿಷ್ಠರು ನಿರ್ಧಾರ ಮಾಡುತ್ತಾರೆ.ಮೊದಲು ಅಲ್ಲಿಂದ ಬಂದ ಶಾಸಕರಿಗೆ ಸಚಿ ಸ್ಥಾನ ನೀಡಿ ಋಣ ತೀರಿಸಬೇಕಿದೆ. ಸುಳ್ಯದ ಶಾಸಕ ಅಂಗಾರ ಎನ್ನುವ ವ್ಯಕ್ತಿ ಮತ್ತೊಬ್ಬ ಬಸನಗೌಡ ಯತ್ನಾಳ್ ಆಗಿಲ್ಲ ಈ ವಿಚಾರದಲ್ಲಿ ನಮಗೆ ಅಂಗಾರ ಅವರ ಬಗ್ಗೆ ಹೆಮ್ಮೆಯಿದೆ. ದ.ಕ ಜಿಲ್ಲೆ ಅನ್ನೋದು ಶಿಸ್ತಿನ ಜಿಲ್ಲೆ ಎಂದು ಹೇಳಿದರು.
ನಳಿನ್ ಕಟೀಲ್ ಸಂಘಟನೆ ಶಕ್ತಿ ಎಷ್ಟಿದೆ ಅಂದ್ರೆ ಪ್ರತೀ ರಾತ್ರಿ ಸಿದ್ದರಾಮಯ್ಯರಿಗೆ ಕನಸಿನಲ್ಲೂ ನಳಿನ್ ಬರ್ತಾರೆಅಷ್ಟರ ಮಟ್ಟಿಗೆ ಇಡೀ ರಾಜ್ಯದಲ್ಲಿ ನಳಿನ್ ಕಟೀಲ್ ಸಂಘಟನೆ ಮಾಡುತ್ತಾ ಇದ್ದಾರೆ.ಅದರ ಜೊತೆಗೆ ರಾಷ್ಟ್ರ ರಾಜಕಾರಣದ ಶಕ್ತಿ ಬಿ.ಎಲ್.ಸಂತೋಷ್ ಅವರು ಈ ಜಿಲ್ಲೆಯವರು ಎನ್ನುವುದು ಹೆಮ್ಮೆ ಎಂದರು.
ಗ್ರಾ.ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಚಾರದ ಬಗ್ಗೆ ಮಾತಾನಾಡಿದ ಅವರು,ದ.ಕ ಜಿಲ್ಲೆಯ ಎರಡು ಗ್ರಾ.ಪಂಚಾಯತ್ ಗಳನ್ನು ರಾಷ್ಟ್ರದ್ರೋಹಿಗಳು ಹಿಡಿದಿದ್ದಾರೆ ಅವರು ಪಾಕಿಸ್ತಾನ ಪರ ಘೋಷಣೆ ಕೂಗಿದ್ರೆ ಕಾಂಗ್ರೆಸ್ಸಿಗರು ಅದನ್ನ ಖಂಡಿಸೋಕೆ ಸಿದ್ದರಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ಗೋ ಮಾತೆ ಶಾಪಕ್ಕೆ ಬಲಿಯಾಗಿ ಎಲ್ಲ ಕಳೆದುಕೊಂಡರು,ಎಚ್ಡಿ ಕೆ ಮುಂದಿನ ಅವಧಿ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಅಂತಾರೆ,ಅತ್ತ ಸಿದ್ದರಾಮಯ್ಯ ನಾವು ಅಧಿಕಾರಕ್ಕೆ ಬರ್ತೀವಿ ಅಂತಾರೆ.ನಾನು ಗೋ ಮಾಂಸ ತಿಂತೇನೆ ಅನ್ನೋ ಸಿದ್ದರಾಮಯ್ಯ ತಿಂದು ಸಾಯಲಿ ನಮಗೇನು.ಗೋ ಮಾಂಸ ತಿಂತೀನಿ ಅಂದ್ರೂ ಒಬ್ಬ ಕಾಂಗ್ರೆಸ್ ನಾಯಕ ವಿರೋಧಿಸಿಲ್ಲಪಾಕ್ ಪರ ಘೋಷಣೆ ಕೂಗಿದವರನ್ನ ವಿರೋಧಿಸೋ ಯೋಗ್ಯತೆ ಇಲ್ಲ ಇವರುಗಳಿಗೆ ಇನ್ನೊಮ್ಮೆ ಪಾಕಿಸ್ತಾನ ಝಿಂದಾಬಾದ್ ಕೂಗಿದ್ರೆ ಎಚ್ಚರ ಹಾಗಾದ್ರೆ ಭಾರತ್ ಮಾತೆಗೆ ಜೈ ಕೂಗುವ ಹುಡುಗರು ನಿಮ್ಮ ನಾಲಗೆ ಕಿತ್ತು ಹಾಕ್ತಾರೆ ಎಂದು ಗುಡುಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
Congress party: ಮಾಲೀಕಯ್ಯ ಗುತ್ತೇದಾರ್ ಇಂದು ಕಾಂಗ್ರೆಸ್ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!