ಕರ ಸಮಾಧಾನ ಸೌಲಭ್ಯ ಅವಧಿ ಜು.31ರವರೆಗೆ ವಿಸ್ತರಣೆ
Team Udayavani, Jun 30, 2019, 3:00 AM IST
ಬೆಂಗಳೂರು: ಜಿಎಸ್ಟಿ ಜಾರಿಗೂ ಮುನ್ನ ವ್ಯಾಪಾರ-ವಹಿವಾಟುದಾರರು ಬಾಕಿ ಉಳಿಸಿಕೊಂಡಿದ್ದ ತೆರಿಗೆಗೆ ಸಂಬಂಧಪಟ್ಟಂತೆ ಬಡ್ಡಿ, ದಂಡ ವಿನಾಯ್ತಿ ನೀಡಿ ಏಕಕಾಲಕ್ಕೆ ತೆರಿಗೆ ಪಾವತಿಸಲು ಕಲ್ಪಿಸಿದ್ದ ಕರ ಸಮಾಧಾನ ಸೌಲಭ್ಯವನ್ನು ಜು.31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿಎಸ್ಟಿ ಜಾರಿಗೂ ಮೊದಲು ವ್ಯಾಪಾರ-ವಹಿವಾಟುದಾರರು ವ್ಯಾಟ್, ಮಾರಾಟ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ತೆರಿಗೆ ಪಾವತಿ ವಿಳಂಬದಿಂದಾಗಿ ವಾಣಿಜ್ಯ ತೆರಿಗೆ ಇಲಾಖೆ ದಂಡ, ಬಡ್ಡಿ ವಿಧಿಸಿತ್ತು. ಬಳಿಕ ವ್ಯಾಪಾರ-ವ್ಯವಹಾರಸ್ಥರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು,
ಬಡ್ಡಿ, ದಂಡ ವಿನಾಯ್ತಿ ನೀಡಿ ಒಂದೇ ಬಾರಿಗೆ ಬಾಕಿ ತೆರಿಗೆ ಪಾವತಿಗೆ ಕರ ಸಮಾಧಾನ ಸೌಲಭ್ಯ ಕಲ್ಪಿಸಿದ್ದರು. ಕರ ಸಮಾಧಾನ ಸೌಲಭ್ಯ ಪಡೆಯಲು ಜೂ.30 ಕಡೆಯ ದಿನವಾಗಿತ್ತು. ಈಗ ಸರ್ಕಾರ ಜು.31ರವರೆಗೆ ಅವಧಿ ವಿಸ್ತರಿಸಿ ಶುಕ್ರವಾರ ಆದೇಶ ಹೊರಡಿಸಿದೆ.
ನಮ್ಮ ಮನವಿಯಂತೆ ವ್ಯಾಪಾರ-ವಹಿವಾಟುದಾರರ ಅನುಕೂಲಕ್ಕಾಗಿ ಕರ ಸಮಾಧಾನ ಸೌಲಭ್ಯ ಅವಧಿಯನ್ನು ಜು.31ರವರೆಗೆ ವಿಸ್ತರಿಸಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲಾಗುವುದು. ಇದಕ್ಕೆ ಪೂರಕವಾಗಿ ಅಧಿಕಾರಿಗಳು ಕಾಲಮಿತಿಯಲ್ಲಿ ಸೂಕ್ತ ಆದೇಶಗಳನ್ನು ಹೊರಡಿಸಬೇಕು. ವ್ಯಾಪಾರ-ವಹಿವಾಟುದಾರರು ಸೌಲಭ್ಯವನ್ನು ತ್ವರಿತವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಎಫ್ಕೆಸಿಸಿಐ ಜಿಎಸ್ಟಿ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ