ಹೇಮಂತ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು: ಅಧಿಪತ್ಯ ಸಾಧಿಸಲು ನಡೆಯಿತೇ ಹತ್ಯೆ?
Team Udayavani, Jul 24, 2022, 10:17 AM IST
ಬೆಂಗಳೂರು: ಇತ್ತೀಚೆಗೆ ಹುಟ್ಟಹಬ್ಬದ ದಿನವೇ ಕೆಂಗೇರಿ ಕೊನಸಂದ್ರ ಕರೆ ಸಮೀಪ ಬರ್ಬರವಾಗಿ ಹತ್ಯೆಗೀಡಾದ ಎಚ್.ಗೊಲ್ಲಹಳ್ಳಿ ನಿವಾಸಿ ಹೇಮಂತ್ನ ಕೊಲೆ ಪ್ರಕರಣ ಹೊಸ ತಿರುವು ಸಿಕ್ಕಿದ್ದು, ರೌಡಿಶೀಟರ್ ಕುಳ್ಳ ರಿಜ್ವಾನ್ನ ಸಹಚರರೇ ಹತ್ಯೆಗೈದಿದ್ದಾರೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕೆಂಪೇಗೌಡ ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಬಂಧನಕ್ಕೀಡಾದ ರಿಜ್ವಾನ್ನ ಮೊಬೈಲ್ ಪರಿಶೀಲಿಸಿದಾಗ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ, ಈತನ ಸಹಚರರು “ತಮ್ಮ ಬಾಸ್ ಯಾರೆಂದು ಗೊತ್ತಿಲ್ಲ’ ಎಂದು ಹೇಳಿದಕ್ಕೆ ಹೇಮಂತ್ನನ್ನು ಕೊಲೆಗೈದಿದ್ದಾರೆ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ.
ಜು. 16ರಂದು ಜನ್ಮದಿನ ಆಚರಿಸಿಕೊಳ್ಳುವುದಕ್ಕಾಗಿ ಮೂವರು ಸ್ನೇಹಿತರ ಜತೆ ಹೇಮಂತ್, ಕೆಂಗೇರಿಯ ನೈಸ್ ರಸ್ತೆ ಬಳಿಯ ಕೋನಸಂದ್ರದ ಅಂಡರ್ ಪಾಸ್ ಬಳಿ ಹೋಗಿದ್ದ. ಅದೇ ವೇಳೆ ಕುಳ್ಳ ರಿಜ್ವಾನ್ ಸಹಚರರು ಕೂಗಳತೆ ದೂರದಲ್ಲಿ ಪಾರ್ಟಿ ಮಾಡುತ್ತಿದ್ದರು. ಇತ್ತ ಹೇಮಂತ್ ಹಾಗೂ ಸ್ನೇಹಿತರು ಮದ್ಯದ ಅಮಲಿನಲ್ಲಿ ರೌಡಿಯಿಸಂ ಬಗ್ಗೆ ಮಾತುಕತೆ ಆರಂಭಿಸಿದ್ದಾರೆ. ರಿಜ್ವಾನ್ ಸಹಚರರು, “ನಮ್ಮ ಬಾಸ್ ಕುಳ್ಳ ರಿಜ್ವಾನ್ ಗೊತ್ತಿಲ್ವಾ’ ಎಂದಿದ್ದಾರೆ ಗೊತ್ತಿಲ್ಲ ಎಂದಾಗ ಕಿಪಿತರಾಗಿ ಮಾರಕಾಸ್ತ್ರದಿಂದ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ಕ್ರಿಕೆಟ್ ಆಡುವಾಗ ಕುಸಿದು ಬಿದ್ದು ಖ್ಯಾತ ಕಿರುತೆರೆ ನಟ ದೀಪೇಶ್ ಭಾನ್ ನಿಧನ
ವಿಚಾರಣೆಯಲ್ಲಿ ಕೃತ್ಯ ಬೆಳಕಿಗೆ
ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೇಮಂತ್ನ ಮುಖ ಮತ್ತು ಹೊಟ್ಟೆ ಇರಿಯುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಕುಳ್ಳ ರಿಜ್ವಾನ್ಗೆ ಕಳುಹಿಸಿ, ಗೆಲುವಿನ ಚಿಹ್ನೆ ಹಾಕಿದ್ದಾರೆ. ವಿಚಾರಣೆ ವೇಳೆ ರಿಜ್ವಾನ್ ಮೊಬೈಲ್ನಲ್ಲಿ ಹೇಮಂತ್ ಕೊಲೆ ವಿಡಿಯೋ ಸಿಕ್ಕಿತ್ತು. ಮತ್ತೊಂದೆಡೆ ಸೈಕಲ್ ರವಿ, ಆತನ ಸಹಚರ ಬೇಕರಿ ರಘು ಕೊಲೆಗೈದು ದಕ್ಷಿಣ ಭಾಗದಲ್ಲಿ ತಾನೂ ಅಧಿಪತ್ಯ ಸಾಧಿಸಲು ರಿಜ್ವಾನ್ ಸಿದ್ಧತೆ ನಡೆಸುತ್ತಿದ್ದ ತನಿಖೆಯಲ್ಲಿ ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ