ಥಿಯೇಟರ್ ಹೊರಗೆ ಘರ್ಷಣೆ;ತಮಿಳು ಚಿತ್ರ ನಿಷೇಧಿಸಲು ಪ್ರತಿಭಟನೆ
Team Udayavani, Oct 19, 2017, 4:41 PM IST
ಬೆಂಗಳೂರು: ಖ್ಯಾತ ತಮಿಳು ನಟ ಇಳಯ ದಳಪತಿ ವಿಜಯ್ ಅಭಿಮಾನಿಗಳು ಕನ್ನಡಿಗನೊಬ್ಬನಿಗೆ ಚಿತ್ರಮಂದಿರದಲ್ಲಿ ಥಳಿಸಿದ ಬಗ್ಗೆ ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಬಳಿಕ ತಮಿಳು ಚಿತ್ರ ನಿಷೇಧಕ್ಕಾಗಿ ಕರವೇ ಪ್ರತಿಭಟನೆ ನಡೆಸುತ್ತಿದೆ.
ವಿಜಯ್ ಅಭಿನಯದ ‘ಮೇರ್ಸಲ್’ಚಿತ್ರದ ಪ್ರದರ್ಶನ ಕಾಣುತ್ತಿದ್ದ ರಾಧಾಕೃಷ್ಣ ಚಿತ್ರಮಂದಿರದ ಬಳಿ ಬುಧವಾರ ಘಟನೆ ನಡೆದಿದ್ದು,ವಿಜಯ್ ಕಟೌಟ್ ಮೇಲೆ ಕುಳಿತಿರುವುದನ್ನು ಆಕ್ಷೇಪಿಸಿ ಅಭಿಮಾನಿಗಳು ಕನ್ನಡಿಗನಿಗೆ ಥಳಿಸಿದ್ದಾರೆ ಎನ್ನಲಾಗಿದೆ.
ಘಟನೆ ನಡೆದ ಕೂಡಲೇ ಪ್ರವೀಣ್ ಶೆಟ್ಟಿ ಬಣದ ನೂರಾರು ಕರವೇ ಕಾರ್ಯಕರ್ತರು ಚಿತ್ರಮಂದಿರದ ಹೊರಗೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಚಿತ್ರ ಪ್ರದರ್ಶನ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
4 ಗಂಟೆಯ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುವುದಾಗಿ ಚಿತ್ರಮಂದಿರದ ಮಾಲೀಕ ಹೇಳಿದ ಬಳಿಕವಷ್ಟೇ ಪ್ರತಿಭಟನೆ ಹಿಂಪಡೆದುಕೊಳ್ಳಲಾಗಿದೆ.
ಹತ್ತಕ್ಕೂ ಹೆಚ್ಚು ಉದ್ರಿಕ್ತರು ಥಳಿಸಿರುವುದಾಗಿ ವರದಿಯಾಗಿದ್ದು , ತಮಿಳು ಭಾಷೆಯಲ್ಲಿ ಅವಾಚ್ಯವಾಗಿ ಬೈದಿರುವುದಾಗಿ ಹಲ್ಲೆಗೊಳಗಾದ ಯುವಕ ಹೇಳಿಕೊಂಡಿದ್ದಾನೆ.
ಇದೀಗ ತಮಿಳು ಚಿತ್ರವನ್ನು ರಾಜ್ಯಾದ್ಯಂತ ನಿಷೇಧ ಮಾಡಬೇಕೆಂದು ವಿವಿಧ ಸಂಘಟನೆಗಳೊಂದಿಗೆ ಕೂಡಿಕೊಂಡು ಭಾರಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿರುವುದಾಗಿ ವರದಿಯಾಗಿದೆ.
ಕನ್ನಡ ಗ್ರಾಹಕರ ಕೂಟ ತಮಿಳು ಚಿತ್ರ ನಿಷೇಧಿಸಬೇಕೆಂಬ ಕರವೇಯ ಪ್ರತಿಭಟನೆಗೆ ನಾವು ಬೆಂಬಲ ನೀಡುವುದಿಲ್ಲ ಎಂದಿದೆ. ಸಂಘಟನೆಯ ಅಧ್ಯಕ್ಷ ಗಣೇಶ್ ಚೇತನ್ ಈ ರೀತಿ ಪ್ರತಿಭಟನೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ
ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್ಗೆ ವಿನಾಯಿತಿ
NDA; ಮಂಡ್ಯಕ್ಕೆ ಬಂದಿರುವ ಕುಮಾರಸ್ವಾಮಿಯನ್ನು ಸೋಲಿಸಿ ಮನೆಗೆ ಕಳಿಸಿ: ಸಿದ್ದರಾಮಯ್ಯ
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ