ಉತ್ಸವದ ವೇಳೆ ಪಟಾಕಿ ದುರಂತ; 21 ರ ಯುವತಿ ದಾರುಣ ಸಾವು
Team Udayavani, Dec 3, 2018, 9:31 AM IST
ತಿಪಟೂರು:ಇಲ್ಲಿ ಭಾನುವಾರ ತಡರಾತ್ರಿ ನಡೆದ ಪಟಾಕಿ ದುರಂತದಲ್ಲಿ 21 ವರ್ಷ ಪ್ರಾಯದ ಯುವತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಗಣೇಶೋತ್ಸವದ ಸಂಭ್ರಮದ ವೇಳೆ ಭಾರೀ ಪ್ರಮಾಣದಲ್ಲಿ ಸುಡುಮದ್ದನ್ನು ಸಿಡಿಸಲಾಗುತ್ತಿತ್ತು. ಈ ವೇಳೆ ಪಟಾಕಿಯೊಂದು ಸಿತಾರಾ ಎನ್ನುವ ಯುವತಿಯ ತಲೆಯ ಮೇಲೆ ಬಿದ್ದು ಸಿಡಿದಿದೆ.
ಗಂಭೀರವಾಗಿ ಗಾಯಗೊಂಡ ಸಿತಾರಾರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಸಿತಾರಾ ತುರುವೇಕೆರೆ ಅಮ್ಮಸಂದ್ರದ ರಾಜಣ್ಣ ಎನ್ನುವವರ ಪುತ್ರಿ.
ತಿಪಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.