ಕರಾವಳಿ ಅಭಿವೃದ್ಧಿ ವಿಷನ್ ಗ್ರೂಪ್ ರಚನೆ
Team Udayavani, May 7, 2021, 6:28 AM IST
ಬೆಂಗಳೂರು: ರಾಜ್ಯದ ಕಡಲ ತೀರದ ಸಮಗ್ರ ಅಭಿವೃದ್ಧಿ ಜತೆಗೆ ಹೂಡಿಕೆ ಆಕರ್ಷಿಸಿ ಆರ್ಥಿಕ, ವಾಣಿಜ್ಯ ಚಟುವಟಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಸರಕಾರ “ಕರಾವಳಿ ಅಭಿವೃದ್ಧಿ ವಿಷನ್ ಗ್ರೂಪ್’ ರಚಿಸಿದೆ.
ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆಯ (ಎಫ್ಐಸಿಸಿಐ) ಕರ್ನಾಟಕ ಘಟಕದ ಅಧ್ಯಕ್ಷ ಉಲ್ಲಾಸ್ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಈ ಗ್ರೂಪ್ ರಚನೆಯಾಗಿದೆ. ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್, ವಿಶಾಲ್ ಹೆಗ್ಡೆ (ವೈದ್ಯಕೀಯ ಶಿಕ್ಷಣ), ಮಂಜುನಾಥ ಭಂಡಾರಿ (ತಾಂತ್ರಿಕ ಶಿಕ್ಷಣ), ಪ್ರಕಾಶ್ ಕಾಲಾºವಿ (ಗೋಡಂಬಿ ಕೈಗಾರಿಕೆ), ಗೌರವ್ ಹೆಗ್ಡೆ (ಎಂಎಸ್ಎಂಇ), ಎನ್ಎಂಪಿಟಿ ಸಹಾಯಕ ನಿರ್ದೇಶಕ (ಸಂಶೋಧನೆ) ಪ್ರಂಜಾಲ್ ಘಾಟೆ, ಎಂಆರ್ಪಿಎಲ್ನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಹಣಕಾಸು) ಯೋಗೀಶ್ ನಾಯಕ್, ಮೀನುಗಾರಿಕೆ ಕಾಲೇಜಿನ ಡೀನ್ ಡಾ| ಎ.ಸೆಂಥಿಲ್ ವೇಲ್, ಅಭಯ್ ಹಂಜುರಾ (ಸಮುದ್ರ ಮೀನು ಖಾದ್ಯ), ಕ್ಯಾ| ಜಾನ್ ಪ್ರಸಾದ್ ಮಿನೇಜೆಸ್ (ಮೆರಟೈಮ್), ವತಿಕಾ ಪೈ (ಪ್ರವಾಸೋದ್ಯಮ ಮತ್ತು ಆತಿಥ್ಯ), ಜಿತೇಂದ್ರ ಎಸ್. ಕೊಠಾರಿ (ರಿಯಲ್ ಎಸ್ಟೇಟ್), ಜಿ. ನಂದಗೋಪಾಲ್ ಶೆಣೈ (ಕನ್ಸಲ್ಟಂಟ್), ಪ್ರದೀಪ್ ಪೈ (ಎಫ್ಎಂಸಿಜಿ), ಗಿರಿಧರ್ ಕಾಮತ್ (ಚಾರ್ಟರ್ಡ್ ಅಕೌಂಟೆಂಟ್) ಅವರು ಸದಸ್ಯರಾಗಿದ್ದು, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.
“ಫಿಕ್ಕಿ’ ಕಳೆದ ಮಾರ್ಚ್ನಲ್ಲಿ ಮಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ “ಕರಾವಳಿ ಅಭಿವೃದ್ಧಿ ವಿಷನ್ ವರದಿ 2030′ ಸಿದ್ಧಪಡಿಸಲು ವಿಷನ್ ಗ್ರೂಪ್ ರಚಿಸುವಂತೆ ಮನವಿ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ