ಗ್ರಾಮೀಣ ಭಾಗದ ಖಾತೆ ಕೊಡಿ
Team Udayavani, Feb 6, 2020, 3:02 AM IST
ಬೆಂಗಳೂರು: “ಸಂಪುಟದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಗ್ರಾಮೀಣ ಭಾಗದ ಖಾತೆ ಕೊಟ್ಟರೆ ಚೆನ್ನಾಗಿ ಕಾರ್ಯನಿರ್ವಹಿಸುವೆ’ ಎಂದು ಶ್ರೀಮಂತ್ ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದರು.
ಸಂಪುಟ ವಿಸ್ತರಣೆಯಲ್ಲಿ ಕುಮಟಳ್ಳಿ ಅಥವಾ ತನಗೆ ಸಂಪುಟ ಸ್ಥಾನ ಎಂದು ಹೇಳಲಾಗುತ್ತಿದೆ. ಆದರೆ, ಇದುವರೆಗೂ ಯಾವುದೇ ಸಂದೇಶ ಬಂದಿಲ್ಲ. ತನಗೂ ಮಂತ್ರಿಯಾಗಬೇಕು ಎಂಬ ಬಯಕೆ ಇದೆ ಎಂದು ತಿಳಿಸಿದರು. ತನಗೆ ಸಚಿವ ಸ್ಥಾನ ನೀಡಲು ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟವಾಗಿಯೇ ಹೇಳಿದ್ದು ಭರವಸೆಯೂ ದೊರೆತಿದೆ ಎಂದರು.