ಬೆಳೆ ನಾಶದ ಬಗ್ಗೆ ಮುಚ್ಚಿಡುವ ಕೆಲಸವನ್ನು ಸರ್ಕಾರ ಮಾಡಿಲ್ಲ: ಬಿ.ಸಿ.ಪಾಟೀಲ್
Team Udayavani, Nov 25, 2021, 4:04 PM IST
ಬೆಂಗಳೂರು: ಬೆಳೆ ನಾಶದ ಬಗ್ಗೆ ಮುಚ್ಚಿಡುವ ಕೆಲಸವನ್ನು ಮಾಡಿಲ್ಲ. ಸರ್ಕಾರ ಎಲ್ಲವನ್ನೂ ಪಾರದರ್ಶಕವಾಗಿ ತೆರೆದಿಟ್ಟಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಜುಲೈನಿಂದ ಇಲ್ಲಿಯವರೆಗೆ 11 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ನವೆಂಬರ್ ನಲ್ಲಿ ಐದು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದರು.
ಇದನ್ನೂ ಓದಿ:ಹಂಸಲೇಖ ಹೇಳಿದ್ದರಲ್ಲಿ ತಪ್ಪೇನಿಲ್ಲ: ಪ್ರಿಯಾಂಕ್ ಖರ್ಗೆ
ಬೆಳೆ ಪರಿಹಾರ ರೈತರ ಅಕೌಂಟಿಗೆ ಹೋಗುತ್ತದೆ. ಅದೇನು ಸಿದ್ದರಾಮಯ್ಯ ಅಕೌಂಟಿಗೆ ಹೋಗುತ್ತಾ? ಪರಿಹಾರ ಸಿಕ್ಕವರು ಹೇಳ್ತಾರಾ ಎಂದು ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು.