ಸರ್ಕಾರ ಭ್ರಷ್ಟೋತ್ಸವ ಮಾಡುವಲ್ಲಿ ಹೆಚ್ಚು ಸಕ್ರಿಯ: ಪ್ರಿಯಾಂಕ್ ಖರ್ಗೆ
Team Udayavani, Sep 5, 2022, 10:00 PM IST
ಬೆಂಗಳೂರು: ಸರ್ಕಾರಕ್ಕೆ ಜನೋತ್ಸವ ಮಾಡುವ ಯಾವ ನೈತಿಕತೆ ಅಥವಾ ಯೋಗ್ಯತೆಯೂ ಇಲ್ಲ. ಬದಲಿಗೆ ಭ್ರಷ್ಟೋತ್ಸವ ಮಾಡುತ್ತಿದೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನೋತ್ಸವ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರದ ಒಂದೇ ಒಂದು ಸಾಧನೆ ಇಲ್ಲ. ಜನೋತ್ಸವ 2-3 ಬಾರಿ ಮುಂದೂಡಲ್ಪಟ್ಟಿದ್ದು ಯಾಕೆ? ಜನರ ಆಕ್ರೋಶದಿಂದಲೇ ಹೊರತು, ಬೇರೆ ಕಾರಣ ಇಲ್ಲ. ಸರ್ಕಾರ ಭ್ರಷ್ಟೋತ್ಸವ ಮಾಡುವಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂದು ಆರೋಪಿಸಿದರು.
ಈ ಸರ್ಕಾರದಲ್ಲಿ ಬೆಂಗಳೂರು ಉಸ್ತುವಾರಿ ಸಚಿವರಿಲ್ಲ ಯಾಕೆ? ಬೆಂಗಳೂರು ಉಸ್ತುವಾರಿಗೆ 40 ಪರ್ಸೆಂಟ್ ಬದಲು 50 ಪರ್ಸೆಂಟ್ ಕಮಿಷನ್ ಇದೆ ಎಂದು ಅವರು ಉಸ್ತುವಾರಿಗಾಗಿ ಕಿತ್ತಾಡುತ್ತಿದ್ದಾರಾ? ಕಳೆದ ಮೂರು ವರ್ಷಗಳಿಂದ ಇಷ್ಟು ಧಾರಾಕಾರ ಮಳೆ ಸುರಿದು ವ್ಯವಸ್ಥೆ ಇಷ್ಟು ಹದಗೆಟ್ಟಿದ್ದರೂ ಸರ್ಕಾರಕ್ಕೆ ಯಾಕೆ ಒಂದು ಟಾಸ್ಕ್ ಫೋರ್ಸ್ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಐಟಿ ಉದ್ಯಮಿಗಳು ಮುಖ್ಯಮಂತ್ರಿಗಳಿಗೆ ಅಧಿಕೃತ ಪತ್ರ ಬರೆದಿದ್ದು, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹಿಂಪಡೆಯುವುದಾಗಿ ಹೇಳಿದ್ದಾರೆ. ಸಿಲಿಕಾನ್ ಸಿಟಿಯನ್ನು ಈ ಸರ್ಕಾರ “ಸಿಂಕಿಂಗ್ ಸಿಟಿ’ಯನ್ನಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?