ಗ್ರಾಮ ಚರಿತ್ರೆ ಕೋಶ ಯೋಜನೆಗೆ ನವೆಂಬರ್‌ ಗಡುವು


Team Udayavani, Jul 1, 2022, 6:24 AM IST

TDY-25

ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ಗ್ರಾಮೀಣ ಜನವಸತಿಗಳ ಸಮಗ್ರ ಇತಿಹಾಸವನ್ನು ಅನಾವರಣಗೊಳಿಸುವ “ಗ್ರಾಮ ಚರಿತ್ರೆ ಕೋಶ’ ಯೋಜನೆ ಈ ಬಾರಿಯ ರಾಜ್ಯೋತ್ಸವದ ವೇಳೆಗೆ ಪೂರ್ಣಗೊಳ್ಳಲಿದೆ.

ದೇಶದಲ್ಲೇ ಇದೇ ಮೊದಲ ಪ್ರಯತ್ನ ಇದಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜಾರಿಗೆ ತಂದಿರುವ ಗ್ರಾಮ ಚರಿತ್ರೆ ಕೋಶ ಯೋಜನೆ ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ಗ್ರಾಮೀಣ ಜನವಸತಿಗಳ ಪರಂಪರೆ, ಕಲೆ, ಸಾಹಿತ್ಯ, ಧಾರ್ಮಿಕ-ಸಾಮಾಜಿಕ ಆಚರಣೆಗಳು, ಜನಜೀವನ ಪದ್ದತಿ ಸೇರಿದಂತೆ ಸಮಗ್ರ ಇತಿಹಾಸವನ್ನು ದಾಖಲಿಸಲಿದೆ.

ಈಗಾಗಲೇ ರಾಜ್ಯದ 17 ಜಿಲ್ಲೆಗಳ ಸುಮಾರು 30 ಸಾವಿರಕ್ಕೂ ಹೆಚ್ಚು ಗ್ರಾಮಗಳು, ಗ್ರಾಮೀಣ ಜನವಸತಿಗಳ ಸಮಗ್ರ ಇತಿಹಾಸ-ಪರಂಪರೆಯನ್ನು ದಾಖಲಿಸುವ ಸಂಪುಟಗಳ ರಚನೆ ಕಾರ್ಯ ಪೂರ್ಣಗೊಂಡಿದೆ. ಉಳಿದ 14 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ ಕಾರ್ಯ ಪ್ರಗತಿಯಲ್ಲಿದ್ದು, ಎರಡ್ಮೂರು ತಿಂಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದ್ದು, ನವೆಂಬರ್‌ 1ರ ರಾಜ್ಯೋತ್ಸವದ ದಿನದಂದು ಸಂಪುಟಗಳನ್ನು ಪ್ರಕಟಿಸುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಇಟ್ಟುಕೊಂಡಿದೆ.

ರಾಜ್ಯದಲ್ಲಿ 28 ಸಾವಿರಕ್ಕೂ ಹೆಚ್ಚು ಕಂದಾಯ ಗ್ರಾಮಗಳಿವೆ. ಇದಲ್ಲದೇ ತಾಂಡಾ, ಹಾಡಿ, ಹಟ್ಟಿ, ಬೇಚರಾಕ್‌ ಮತ್ತಿತರರು ಕಂದಾಯವಲ್ಲದ, ದಾಖಲೆ ಹೊಂದಿಲ್ಲದ ಜನವಸತಿ ಪ್ರದೇಶಗಳನ್ನು ಸೇರಿಸಿಕೊಂಡರೆ ರಾಜ್ಯದಲ್ಲಿ ಒಟ್ಟಾರೆ 55 ಸಾವಿರ ಜನವಸತಿಗಳಿವೆ, ಪ್ರತಿ ತಾಲೂಕಿನಲ್ಲಿ ಸುಮಾರು 180ಕ್ಕೂ ಹೆಚ್ಚು ಜನವಸತಿಗಳು ಬರುತ್ತವೆ. ಅದರಂತೆ, ರಾಜ್ಯದ 31 ಜಿಲ್ಲೆಗಳ, 226 ತಾಲೂಕುಗಳ ಪ್ರತಿಯೊಂದು ಗ್ರಾಮ ಮತ್ತು ಗ್ರಾಮೀಣ ಜನವಸತಿ ಪ್ರದೇಶಗಳ ಸಮಗ್ರ ಇತಿಹಾಸವನ್ನು ಗ್ರಾಮ ಚರಿತ್ರೆ ಕೋಶ ಯೋಜನೆ ಮೂಲಕ ಸಂಪುಟಗಳ ರೂಪದಲ್ಲಿ ತರಲಾಗುತ್ತಿದೆ. ಗ್ರಾಮಗಳ ಇತಿಹಾಸ ಸಂರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಏನಿದು “ಗ್ರಾಮ ಚರಿತ್ರೆ ಕೋಶ’:

ದೇಶದ ಬೇರುಗಳು ಇರುವುದು ಗ್ರಾಮಗಳಲ್ಲಿ. ಗ್ರಾಮಗಳ ಇತಿಹಾಸ ತಿಳಿದುಕೊಂಡರೆ ದೇಶದ ಇತಿಹಾಸವನ್ನು ಅರ್ಥಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ 2006ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ “ಕರ್ನಾಟಕ ಜಾನಪದ ಕೋಶ’ ಯೋಜನೆ ಜಾರಿಗೆ ತಂದಿತ್ತು. ಕೆಲ ಕಾರಣಳಿಂದ ಈ ಯೋಜನೆ ಸ್ಥಗಿತಗೊಂಡಿತು. 2010ರಲ್ಲಿ ಕರ್ನಾಟಕ ಜಾನನಪದ ವಿವಿ ಸ್ಥಾಪನೆಗೊಂಡ ಬಳಿಕ ಡಾ. ಎಂ.ಎಂ. ಕಲಬುರ್ಗಿ, ಗೂರೂರು ಚನ್ನಬಸಪ್ಪ, ಅಂಬಳಿಕೆ ಹಿರಿಯಣ್ಣ ಮತ್ತಿತರರ ಮುತುವರ್ಜಿಯ ಪರಿಣಾಮ ಇದಕ್ಕೆ ಗ್ರಾಮ ಚರಿತ್ರೆ ಕೋಶ ಯೋಜನೆಯ ಸ್ವರೂಪ ಸಿಕ್ಕಿತು. 2013ರಲ್ಲಿ ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ್‌ ಇದಕ್ಕಾಗಿ 10 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಒದಗಿಸಿಕೊಟ್ಟರು. ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಜಾನಪದ ವಿವಿ ಜಂಟಿಯಾಗಿ ಗ್ರಾಮಗಳ ಇತಿಹಾಸದ ಮಾಹಿತಿ ಕಲೆ ಹಾಕುವ ಕೆಲಸ ಆರಂಭಿಸಿದವು. ನಿಧಾನವಾಗಿ ಸಾಗಿದ್ದ ಯೋಜನೆಗೆ 2017ರಲ್ಲಿ ಮರು ಜೀವ ಕೊಡಲಾಯಿತು. ಈಗ 17 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶಗಳು ಸಿದ್ದಗೊಂಡಿದ್ದು, ಇನ್ನೂ 14 ಜಿಲ್ಲೆಗಳ ಕೆಲಸ ಪ್ರಗತಿಯಲ್ಲಿದೆ ಎಂದು ಗ್ರಾಮ ಚರಿತ್ರೆ ಕೋಶ ಯೋಜನೆಯ ಆರಂಭದಿಂದಲೂ ಇರುವ ಇಲಾಖೆ ನಿವೃತ್ತ ನಿರ್ದೇಶಕ ಹಾಗೂ ಹಾಲಿ ಸಲಹೆಗಾರ ಎಂ.ಕೆ. ಕೆಂಪೇಗೌಡ ಹೇಳುತ್ತಾರೆ.

ಗ್ರಾಮ ಚರಿತ್ರೆ ಕೋಶದಲ್ಲಿ ಏನಿರಲಿದೆ? :

ಗ್ರಾಮದ ಹೆಸರಿನ ಹಿನ್ನಲೆ ಸೇರಿದಂತೆ ಇತಿಹಾಸ, ಪರಂಪರೆ, ಭಾಷೆ, ಕಲೆ-ಸಂಸ್ಕೃತಿಮ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳು, ಕುಲಕಸಬುಗಳು, ಮಠ-ಮಂದಿರ, ಚರ್ಚ್‌, ಮಸೀದಿ, ಗಡಿ-ಗೋಪುರಗಳು, ನದಿ, ಹಳ್ಳಗಳು, ಸ್ಕಾರಕ, ಶಾಸನಗಳು, ಐತಿಹಾಸಿಕ ಸ್ಥಳಗಳು, ಪ್ರವಾಸಿ ತಾಣಗಳು, ಗ್ರಾಮದ ಕೃಷಿ ಜಮೀನು, ಉದ್ಯೋಗ, ಶಿಕ್ಷಣ,ಸ ಸಾಕ್ಷರತೆ, ನಾಗರಿಕ ಸೌಲಭ್ಯಗಳು, ಆರ್ಥಿಕ ವ್ಯವಸ್ಥೆ ಸೇರಿದಂತೆ ಗ್ರಾಮದ ಸಮಗ್ರ ಇತಿಹಾಸ ಈ ಗ್ರಾಮ ಚರಿತ್ರೆ ಕೋಶದಲ್ಲಿರಲಿದೆ. 5 ತಾಲೂಕುಗಳಿಗೆ ಒಂದು ಸಂಪುಟ, 5ಕ್ಕಿಂತ ಹೆಚ್ಚು ತಾಲೂಕುಗಳಿರುವ ಜಿಲ್ಲೆಗಳಿಗೆ ಎರಡ್ಮೂರು ಸಂಪುಟಗಳಲ್ಲಿ ಮಾಹಿತಿ ದಾಖಲಿಸಲಾಗುತ್ತದೆ. ಇದು ಗ್ರಾಮಗಳ ಇತಿಹಾಸ ತಿಳಿಯುವ ಆಕರ ದಾಖಲೆ ಆಗಲಿದೆ. ಸಂಪುಟಗಳ ರೂಪದಲ್ಲದೆ, ಡಿಜಿಟಲ್‌ ಮಾದರಿಯಲ್ಲೂ ಈ ಇತಿಹಾಸ ಸಾರ್ವಜನಿಕರಿಗೆ ಲಭ್ಯವಾಗಲಿದೆ.

” ಕರ್ನಾಟಕ ಗ್ರಾಮ ಚರಿತ್ರೆ ಕೋಶ ಯೋಜನೆ ಕೆಲಸ ಚುರುಕುಗೊಂಡಿದೆ. ಈಗಾಗಲೇ 17 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶಗಳನ್ನು ಪ್ರಕಟಿಸಲಾಗಿದೆ. ಉಳಿದ ಜಿಲ್ಲೆಗಳ ಕಾರ್ಯ ತ್ವರಿತಗೊಳಿಸುವಂತೆ ಸಂಯೋಜಕರು ಮತ್ತು ಸಂಪಾದಕರಿಗೆ ಸೂಚಿಸಲಾಗಿದೆ. ನವೆಂಬರ್‌ ವೇಳೆಗೆ ಕೆಲಸ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ.’.ಉಮಾ ಮಹದೇವನ್‌, ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ.

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.