“ಕೆಟ್ಟ ಗ್ರಹಗಳೆಲ್ಲ ಹೋದಷ್ಟು ಒಳ್ಳೆಯದೇ”: ಮಧು ಬಂಗಾರಪ್ಪಗೆ ಟಾಂಗ್ ನೀಡಿದ ರೇವಣ್ಣ
Team Udayavani, Mar 15, 2021, 4:35 PM IST
ಬೆಂಗಳೂರು: ಕುಮಾರಣ್ಣನ ಹತ್ತಿರ ಕೆಲವು ಗ್ರಹಗಳಿದ್ದವು. ಈಗ ಡಿಕೆ ಶಿವಕುಮಾರ್ ಬಳಿ ಸೇರಿವೆ. ಕುಮಾರಣ್ಣ ಕೆಲ ದಿನ ನೋವು ಅನುಭವಿಸಿದರು, ಆ ಗ್ರಹದ ಪರಿಣಾಮ ಡಿ ಕೆ ಶಿವಕುಮಾರ್ ಅನುಭವಿಸುವುದು ಬೇಡ ಅಂತ ನಮ್ಮ ಮನವಿ. ಕೆಟ್ಟ ಗ್ರಹಗಳೆಲ್ಲ ಹೋದಷ್ಟು ಒಳ್ಳೆಯದೇ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಇತ್ತೀಚಿಗೆ ಕಾಂಗ್ರೆಸ್ ಸೇರಿದ ಮಧು ಬಂಗಾರಪ್ಪಗೆ ಟಾಂಗ್ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಲ್ಲಿಇನ್ನೂ ಕೆಲವು ಗ್ರಹಗಳಿವೆ, ಅವು ಹೋದರೆ ಎಲ್ಲವೂ ಸ್ವಚ್ಚವಾಗುತ್ತದೆ. ಕಾಂಗ್ರೆಸ್ನಲ್ಲಿ ಗ್ರಹಗಳು ಕಡಿಮೆಯಿದೆ. ಈ ಗ್ರಹಗಳೆಲ್ಲ ಹೋದರೆ ಅವರಿಗೆ ಒಳ್ಳೆಯದಂತೂ ಆಗಲ್ಲ. ಭಗವಂತ ಶಿವಕುಮಾರ್ ಅವರಿಗೆ ಒಳ್ಳೆಯದು ಮಾಡಲಿ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ವಿಡಿಯೋ ವೈರಲ್: ಜೀಪ್ ಚಾಲಕನ ಸಮಯಪ್ರಜ್ಞೆ ಆನೆ ದಾಳಿಯಿಂದ ಬಚಾವಾಗಿ ಬಂದ ಪ್ರವಾಸಿಗರು!
ಒಂಭತ್ತು ಗ್ರಹಗಳು ಸುತ್ತುತ್ತವೆ. ಗ್ರಹಗಳು ಪಥ ಬದಲಿಸುತ್ತಿವೆ. ಕೆಪಿಸಿಸಿ ಅಧ್ಯಕ್ಷರು ಅದನ್ನ ಬರಮಾಡಿಕೊಳ್ತಿದ್ದಾರೆ. ಕೆಟ್ಟ ಗ್ರಹಗಳೆಲ್ಲ ಹೋದರೆ ಜೆಡಿಎಸ್ ಪಕ್ಷಕ್ಕೆ ಒಳ್ಳೆಯದು. ಗ್ರಹಗಳು ಹೋದ ಮೇಲೆ ಕುಮಾರಣ್ಣ ಅವರಿಗೆ ಇನ್ನೂ ಒಳ್ಳೆಯದು ಆಗುತ್ತದೆ. 2023ಕ್ಕೆ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.
2023ಗೆ ಕುಮಾರಣ್ಣಗೆ ಗುರುಬಲ ಇದೆ. ಈ ಗ್ರಹಬಲ ಎಲ್ಲಾ ಹೋಗಬೇಕಿತ್ತು. ಇದೀಗ ಗ್ರಹ ದೋಷ ಪರಿಹಾರವಾಗಿದೆ. ಇನ್ನೆರಡು ಗ್ರಹಗಳು ಇದ್ದಾವೆ ಅವೆಲ್ಲಾ ಹೋದರೆ ಕುಮಾರಣ್ಣನಿಗೆ ಒಳ್ಳೆಯದಾಗುತ್ತದೆ ಎಂದು ರೇವಣ್ಣ ಹೇಳಿದರು.
ಇದನ್ನೂ ಓದಿ: ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರುವ ಬಗ್ಗೆ ಕಾದು ನೋಡಿ: ಡಿ.ಕೆ. ಶಿವಕುಮಾರ್
2023 ರಲ್ಲಿ ಜೆಡಿಎಸ್ ಆಡಳಿತ ಪಕ್ಷದಲ್ಲಿ ಇರುತ್ತದೆ. ನಾನು ಸಿಎಂ ಆಗುತ್ತೇನೆ ಎಂದು ಹೇಳುವುದಿಲ್ಲ. ಕುಮಾರಣ್ಣ ಅವರ ನೇತ್ರತ್ವದಲ್ಲಿ ಸರ್ಕಾರ ಇರುತ್ತದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ