ಮೇರಿ ಜೋಸೆಫ್ ಯಾರ್ರೀ? ಮಧು ಬಂಗಾರಪ್ಪಗೆ ಹಾಲಪ್ಪ ಬಾಂಬ್!
Team Udayavani, Aug 23, 2017, 2:52 PM IST
ಶಿವಮೊಗ್ಗ:ಕಂಪ್ಲೇಂಟ್ ಕೊಟ್ಟವನ ಬಗ್ಗೆ ನನಗೇನು ಗೊತ್ತು ಎಂದು ಹೇಳಿದ್ದ ವ್ಯಕ್ತಿ, ಅವರ ಜತೆಯೇ ಸುಮಾರು 146 ಬಾರಿ ಮಾತನಾಡಿದ್ದಾರೆ. ಪರಿಚಯವೇ ಇಲ್ಲದವನ ಜತೆ ಹೇಗೆ ಮಾತನಾಡಿದಿರಿ? ಗಂಡ, ಹೆಂಡತಿ ನಿಮ್ಮ ಪಾರ್ಟಿ ಅಧ್ಯಕ್ಷರಾ? ಅಥವಾ ಅವರೇನ್ ನಿಮ್ ಬ್ಯುಸಿನೆಸ್ ಪಾರ್ಟನ್ ರಾ? ಇದು ಅತ್ಯಾಚಾರ ಆರೋಪ ಪ್ರಕರಣದಲ್ಲಿ ಖುಲಾಸೆಗೊಂಡ ಬಳಿಕ ಮಂಗಳವಾರ ಹುಟ್ಟೂರು ಹೊಳೆಕೊಪ್ಪದಿಂದ ಸೊರಬದವರೆಗೆ ಸುಮಾರು 20 ಕಿಲೋ ಮೀಟರ್ ಪಾದಯಾತ್ರೆ ನಡೆಸಿ ನಂತರ ನಡೆದ ಸಮಾವೇಶದಲ್ಲಿ ಹರತಾಳು ಹಾಲಪ್ಪ ಹೆಸರು ಹೇಳದೆ ಮಧು ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ಬಹಿರಂಗ ಸಭೆಯಲ್ಲಿ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರ ಹೆಸರನ್ನು ಉಲ್ಲೇಖಿಸದೇ ಹಾಲಪ್ಪ ಅವರು ತಿರುಗೇಟು ನೀಡುವ ಮೂಲಕ ಹೊಸ ಬಾಂಬ್ ವೊಂದನ್ನು ಸಿಡಿಸಿದರು.
ನಿಮ್ಮ ರಾಜಕೀಯ ಜೀವನದಲ್ಲಿ ಯಾವತ್ತಾದರೂ 3,000 ಸೆಕೆಂಡ್ಸ್ ಮಾತನಾಡಿದ್ದೀರಾ? ಈ ಕಚಡಾ ಕೆಲಸ ಯಾರು ಮಾಡಿದ್ದಾರೆಂದು ವಕೀಲ ಎಚ್.ಮಂಜುನಾಥ್ ಅವರು ದಾಖಲೆ ಸಹಿತ ನ್ಯಾಯಾಲಯಕ್ಕೆ ತೋರಿಸಿದ್ದಾರೆ. ನಿಮಗೂ ಒಂದು ಪ್ರಶ್ನೆ ಕೇಳುತ್ತೇನೆ, ಮೇರಿ ಜೋಸೆಫ್ ಯಾರು ಅಂತ ಹೇಳಿ? ಮೇರಿ ಜೋಸೆಫ್ ಗೂ ಒಬ್ಬ ಮಗ ಇದ್ದಾನಲ್ಲ ಆತ ಯಾರು ಎಂದು ಹೇಳಿ ಎಂಬುದಾಗಿ ಮಧು ಬಂಗಾರಪ್ಪ ವಿರುದ್ಧ ಬಾಂಬ್ ಸಿಡಿಸಿದ್ದಾರೆ!
ಟೀಕೆ ಮಾಡುವವರೇನು ಸಾಚಾ ಅಲ್ಲ: ಮಧು ಬಂಗಾರಪ್ಪ:
ಯಾರು ಏನು ಬಡಿದುಕೊಳ್ಳುತ್ತಾರೋ ಬಡಿದುಕೊಳ್ಳಲಿ. ಹೇಳೋರಿಗೆ, ಕೇಳೋರಿಗೆ ಉತ್ತರ ಕೊಡೋದಕ್ಕೆ ಆಗುವುದಿಲ್ಲ. ನನಗೆ ಯಾರ ಜತೆ ಯಾವುದೇ ಸಂಬಂಧ ಇಲ್ಲ. ಟೀಕೆ ಮಾಡುವವರೇನು ಸಾಚಾ ಅಲ್ಲ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಹಾಲಪ್ಪ ವಿರುದ್ಧ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ