ನಾಗರಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ
Team Udayavani, Dec 26, 2019, 3:04 AM IST
ಭದ್ರಾವತಿ: ನಾಗರ ಹಾವಿನ ಜೊತೆ ಸರಸ ಆಡಲು ಹೋದ ಯುವಕನೊಬ್ಬ ಅದರಿಂದ ತುಟಿಗೆ ಕಚ್ಚಿಸಿಕೊಂಡು ಪ್ರಾಣಕ್ಕೆ ಕುತ್ತು ತಂದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೊಸಮನೆ ತಮ್ಮಣ್ಣ ಕಾಲೋನಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ತಮ್ಮಣ್ಣ ಕಾಲೋನಿಯ ನಿವಾಸಿ ಸೋನು ಅಲಿಯಾಸ್ ರವಿ ಎಂಬಾತ ಮನೆಯ ಆವರಣದಲ್ಲಿದ್ದ ಹಾವಿಗೆ ಬಗ್ಗಿ ಅದರ ಬಾಯಿಗೆ ಮುತ್ತಿಡುವ ಸಾಹಸಕ್ಕೆ ಮುಂದಾದಾಗ ಆ ಹಾವು ಅವನ ತುಟಿಗೆ ಕಚ್ಚಿದೆ.
ಪರಿಣಾಮ ಆತನ ತುಟಿಯಿಂದ ರಕ್ತಸ್ರಾವ ಆಗುವುದರ ಜೊತೆಗೆ ತುಟಿ ಊದಿಕೊಂಡಿದೆ. ನಂತರ, ಯುವಕನ ಮನೆಯವರು ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸೋನು ಹಾವಿಗೆ ಮುತ್ತಿಕ್ಕುವ ಹಾಗೂ ಅದು ಅವನ ತುಟಿಗೆ ಕಚ್ಚುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?