ಕಠಿಣ ನಿಯಮಗಳ ಜಾರಿಗೆ ವಿಪಕ್ಷಗಳು ಸರ್ಕಾರದ ಜೊತೆ ನಿಲ್ಲಬೇಕು : ಡಾ.ಕೆ.ಸುಧಾಕರ್
Team Udayavani, Apr 20, 2021, 11:37 AM IST
ಬೆಂಗಳೂರು : ನಿನ್ನೆ ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಕೆಲವು ಸತ್ಯ ಹೇಳಿದರೂ, ಕೆಲವೊಂದು ಖೇದಕರ ವಿಷಯಗಳನ್ನು ಸಹ ಹೇಳಿದ್ದಾರೆ. ಇದೊಂದು ಇದು ಸಾಂಕ್ರಾಮಿಕ ರೋಗ ಇದನ್ನು ಪರಿಶ್ರಮ ಹಾಕಿ ತಡೆಯಬೇಕು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಪಕ್ಷಗಳು ಹೇಳಿದ್ದನ್ನೆಲ್ಲಾ ಅಲ್ಲಗಳೆಯಲ್ಲು ಆಗಲ್ಲ. ಮುಂದುವರೆದ ದೇಶಗಳಲ್ಲೂ ಹೆಚ್ಚು ಸಾವುಗಳಾಗಿವೆ. ಅಲ್ಲಿನ ಸರ್ಕಾರಗಳು ವಿಫಲ ಅಂತ ಹೇಳಬಹುದಾ? ಹಾಗೆ ಹೇಳಲು ಆಗಲ್ಲ ಸದ್ಯದ ಕ್ರಮಗಳು ಸಾಲೋದಿಲ್ಲ ಅಂತ ಒಪ್ಪುತ್ತೇನೆ. ಆರೋಗ್ಯ ಮೂಲಭೂತ ಸೌಕರ್ಯ ಒದಗಿಸಿದ್ದೀವಿ ಆದರೆ ಓವರ್ ನೈಟ್ ವೈದ್ಯರನ್ನು ಸೃಷ್ಟಿಸಲು ಆಗಲ್ಲ ಎಂದರು.
ಇವತ್ತು ರಾಜ್ಯಪಾಲರ ನೇತೃತ್ವದಲ್ಲಿ ಸಭೆ ಇದೆ. ಇವತ್ತಿನ ಸಭೆಯಲ್ಲಿ ಕಠಿಣ ನಿಯಮಗಳ ಜಾರಿ ಬಗ್ಗೆ ನಿರ್ಧಾರ ಸರ್ಕಾರದ ಜೊತೆ ವಿರೋಧ ಪಕ್ಷಗಳೂ ಬೆಂಬಲಕ್ಕೆ ನಿಲ್ಲಬೇಕು.ಆರೋಪ ಪ್ರತ್ಯಾರೋಪ ಮಾಡೋದು ಸರಿಯಲ್ಲ ಎಂದರು.
ಇದನ್ನೂ ಓದಿ : ಕೋವಿಡ್ ಹೆಚ್ಚಳ: ಭಾರತ ಪ್ರವಾಸ ಮುಂದೂಡಿ: ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ
ಬೆಂಗಳೂರಿನಲ್ಲಿ ಶೇ.70 ರಷ್ಟು ಪ್ರಕರಣಗಳು ಕಂಡು ಬರುತ್ತಿವೆ. ಬೆಂಗಳೂರು ಕರ್ನಾಟಕದ ಎಪಿಸೆಂಟರ್ ಹಾಗಾಗಿ ಬೆಂಗಳೂರಿಗೆ ಪ್ರತ್ಯೇಕ ನಿಯಮ ಮಾಡಬೇಕಾಗುತ್ತದೆ ಇಲ್ಲಿಂದ ಹೊರಗೆ ಹೋಗುವ ಜನ ಬೇರೆ ಜಿಲ್ಲೆಗಳಲ್ಲಿ ಸೋಂಕು ಹರಡಿಸಬಹುದು ಉಳಿದ ಏಳು ಜಿಲ್ಲೆಗಳಲ್ಲಿ ಯಾವ ನಿಯಮ ತರಬೇಕು ಅಂತಲೂ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಜನ ಗುಂಪು ಸೇರಬಾರದು. ಗುಂಪು ಸೇರೋದ್ರಿಂದಲೇ ಕೋವಿಡ್ ಬರ್ತಿರೋದು. ಕ್ಲೋಸ್ಡ್ ಸರ್ಕ್ಯೂಟ್ ನಲ್ಲಿ ಗುಂಪಿದ್ರೆ ಗಾಳಿ ಮೂಲಕವೂ ವೈರಸ್ ಹರಡುತ್ತದೆ. ಡ್ರಾಪ್ ಲೆಟ್ ಗಳ ಮೂಲಕವೂ ಹರಡುತ್ತದೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ನಿಯಮಗಳನ್ನು ಜಾರಿ ಮಾಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಶಾಸಕ ರೇಣುಕಾಚಾರ್ಯ ಕುರಿತು ಮಾತಾನಾಡಿದ ಅವರು, ರೇಣುಕಾಚಾರ್ಯ ವಿಚಾರ ನನಗೆ ಗೊತ್ತಿಲ್ಲ ಅದರ ಮಾಹಿತಿ ಪಡೆದು ಮಾತಾನಾಡುತ್ತೇನೆ. ಬಹುಶ: ಅವರು ಬೇರೆ ಆಸ್ಪತ್ರೆಗೆ ದಾಖಲಾಗಲು ಬಂದಿರಬಹುದು. ಪಾಸಿಟಿವ್ ರೋಗಿಗಳನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ನಾವೇ ಬೇರೆ ಕಡೆ ಶಿಫ್ಟ್ ಮಾಡಿದ್ದೀವಿ ಖುದ್ದು ಅವರೇ ಬಂದಿರುವ ಬಗ್ಗೆ ತಿಳ್ಕೊಂಡು ಮಾತಾಡ್ತೇನೆ ಎಂದು ಹೇಳಿದರು.