ಮಹಾ ಮಳೆಗೆ ಹೆದ್ದಾರಿ ಬಂದ್ ; ಉಡುಪಿ -ಶಿವಮೊಗ್ಗ ಸಂಚಾರ ಅಸ್ತವ್ಯಸ್ತ
Team Udayavani, Aug 14, 2018, 1:02 PM IST
ಶಿವಮೊಗ್ಗ/ಉಡುಪಿ: ಮಲೆನಾಡು, ಕರಾವಳಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಎಡೆ ಬಿಡದೆ ಭಾರಿ ಮಳೆ ಸುರಿಯುತ್ತಿದ್ದು, ಶಿವಮೊಗ್ಗ-ತೀರ್ಥಹಳ್ಳಿ -ಉಡುಪಿ ಸಂಚಾರ ಸ್ಥಗಿತಗೊಂಡಿದೆ.
ತೀರ್ಥಹಳ್ಳಿ-ಕುಂದಾಪುರ ರಸ್ತೆಯಲ್ಲಿ ಧರೆ ಕುಸಿತವಾಗಿದ್ದು. ಯಡೂರು ಮಾಸ್ತಿಕಟ್ಟೆ ನಡುವೆ ಉಳುಕೊಪ್ಪದ ಬಳಿ ಧರೆ ಕುಸಿದಿದ್ದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ರಸ್ತೆಯ ಎರಡೂ ಬದಿಗಳಲ್ಲಿ 50ಕ್ಕೂ ಹೆಚ್ಚು ವಾಹನಗಳು ನಿಂತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.
ಹೆಬ್ರಿ ಬಳಿಯ ಸೀತಾನದಿ ರಸ್ತೆ ಸಂಚಾರ ಸಂಪೂಣ೯ ಬಂದ್ ಆಗಿದ್ದು ನೀರಿನ ಮಟ್ಟ ಏರ ತೊಡಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಮಡಾಮಕಿ ಮೂಲಕ ಬದಲಿ ಸಂಚಾರ ವ್ಯವಸ್ಥೆ ಮಾಡಲಾಗಿದೆ.