ಕೊಂಬು ಮಾರಾಟ: ನಾಲ್ವರ ಬಂಧನ
Team Udayavani, Feb 20, 2019, 1:22 AM IST
ಮೂಡಿಗೆರೆ: ಕಾಡು ಪ್ರಾಣಿಗಳ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕುಂಬರಡಿ ಗ್ರಾಮದ ಸುರಕ್ಷಿತ್, ಸುಮಿತ್ರ, ಪ್ರಸನ್ನ, ನವೀನ್ ಕುಮಾರ್ ಬಂಧಿತ ಆರೋಪಿಗಳು. ಇವರಿಂದ ಒಂದು ಕಡವೆ ಕೊಂಬು, ಮೂರು ಜಿಂಕೆ ಕೊಂಬು ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸೋಮವಾರ ಬೆಳಗ್ಗೆ ಕುಂಬರಡಿಯಿಂದ ಮೂಡಿಗೆರೆ ಕಡೆಗೆ ಕೊಂಬುಗಳನ್ನು ತೆಗೆದುಕೊಂದು ಬರುತ್ತಿದ್ದ ವೇಳೆ ಬಕ್ಕಿ ಗ್ರಾಮದ ಸಮೀಪ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಎಸಿಎಫ್ ಮುದ್ದಣ್ಣ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಆರ್ಎಫ್ಒ ಪ್ರಸಾದ್,ಡಿಆರ್ಎಫ್ಒಗಳಾದ ಸುಹಾಸ್, ಚಿದಾನಂದ, ಶಿವಕುಮಾರ್, ಶಿವರಾಜ್ ನಾಯಕ್ ಮತ್ತು ಪೊಲೀಸ್ ಅರಣ್ಯ ಸಂಚಾರಿ ದಳದ ಚಂದ್ರೇಗೌಡ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ