ಮುಖ್ಯಮಂತ್ರಿ HDK ಕಣ್ಣೀರಿಗೆ ಕಾರಣ ಯಾರು? ಪರ, ವಿರೋಧ ವಾಕ್ಸಮರ
Team Udayavani, Jul 16, 2018, 1:32 PM IST
ಬೆಂಗಳೂರು: ಮುಖ್ಯಮಂತ್ರಿಯಾಗಿ ನಾನು ಸಂತೋಷವಾಗಿಲ್ಲ. ವಿಷಕಂಠನಾಗಿ ಎಲ್ಲಾ ನೋವನ್ನು ನುಂಗಿಕೊಂಡಿದ್ದೇನೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಕೆಬಿ ಕೋಳಿವಾಡ ಅವರು ಎಚ್ ಡಿಕೆ ಪರ ಬ್ಯಾಟಿಂಗ್ ಮಾಡಿದ್ದಾರೆ.
ವಿಷ ಕೊಟ್ಟಿಲ್ಲ, ಅಮೃತ ಕೊಟ್ಟಿದ್ದೇವೆ: ಮಾಜಿ ಸಚಿವ ಎ.ಮಂಜು
ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾವು ವಿಷ ಕೊಟ್ಟಿಲ್ಲ, ಸಿಎಂ ಸ್ಥಾನ ಕೊಟ್ಟಿದ್ದೇವೆ. ತನ್ನ ಮಗ ಮಾತ್ರ ಚೆನ್ನಾಗಿರಬೇಕು ಎಂದರೆ ಹೇಗೆ ಎಂದು ಪ್ರಶ್ನಿಸಿರುವ ಮಾಜಿ ಸಚಿವ ಎ.ಮಂಜು, ಮದುವೆ ಮಾಡಿಕೊಟ್ಟ ಅಳಿಯ ಕೂಡಾ ಚೆನ್ನಾಗಿರಬೇಕಲ್ವಾ ಎಂದು ತಿರುಗೇಟು ನೀಡಿದ್ದಾರೆ.
ಅವರ ಕೈಯಲ್ಲಿ ಅಮೃತ ಕೊಟ್ಟಿದ್ದೇವೆ, ವಿಷ ಕೊಟ್ಟಿಲ್ಲ. ಕಾಂಗ್ರೆಸ್ ಹೆಗಲ ಮೇಲೆ ಜೆಡಿಎಸ್ ಬಂದೂಕು ಇಟ್ಟುಕೊಂಡಿದೆ ಎಂದು ಆರೋಪಿಸಿದರು.
ಸಿಎಂ ಎಚ್ ಡಿಕೆ ಕಣ್ಣೀರಿಗೆ ಕೆಲ ಕಾಂಗ್ರೆಸ್ ನಾಯಕರೇ ಕಾರಣ: ಕೆಬಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಣ್ಣೀರಿಗೆ ಕೆಲ ಕಾಂಗ್ರೆಸ್ ನಾಯಕರೇ ಕಾರಣ ಎಂದು ಕಾಂಗ್ರೆಸ್ ಪಕ್ಷದ ಮುಖಂಡ, ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ದೂರಿದ್ದಾರೆ.
ಕೆಲ ಕಾಂಗ್ರೆಸ್ ನಾಯಕರಿಗೆ ಸಮ್ಮಿಶ್ರ ಸರ್ಕಾರ ಇಷ್ಟವಿಲ್ಲ. ಹೈಕಮಾಂಡ್ ತೀರ್ಮಾನದಂತೆ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಕೆಲ ನಾಯಕರಿಗೆ ಸಮ್ಮಿಶ್ರ ಸರ್ಕಾರ ಮುಂದುವರಿಸೋದು ಇಷ್ಟವಿಲ್ಲ. ಯಾವ ನಾಯಕರು ಎಂದು ಹೆಸರು ಹೇಳಲ್ಲ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ಹೇಳಿದರು.
ಕಲ್ಲು ಹೃದಯದವರಿಗೆ ಕಣ್ಣೀರು ಬರಲ್ಲ:
ಮಾನವೀಯತೆ ಇದ್ದವರಿಗೆ ಮಾತ್ರ ಕಣ್ಣೀರು ಬರುತ್ತೆ. ಕಲ್ಲು ಹೃದಯ ಇರುವವರಿಗೆ ಕಣ್ಣೀರು ಬರೋದಿಲ್ಲ ಎಂದು ಕೊಪ್ಪಳದಲ್ಲಿ ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಸಾಕಷ್ಟು ಕೆಲಸ ಮಾಡಿದ್ರೂ ಟೀಕೆ ಬಂದಾಗ ಕಣ್ಣೀರು ಬರುತ್ತೆ ಎಂದು ಹೇಳುವ ಮೂಲಕ ಶಾಸಕ ಸುಧಾಕರ್ ಗೆ ನಾಡಗೌಡ ಟಾಂಗ್ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ