Details: ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ ಪಾಲು ಎಷ್ಟು?
Team Udayavani, Feb 1, 2019, 1:03 PM IST
ನವದೆಹಲಿ: 2019-20ನೇ ಸಾಲಿನ ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಯಲ್ಲಿ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಮಂಡಿಸಿದ್ದ ಮಧ್ಯಂತರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಸುಮಾರು ಒಂದು ಸಾವಿರದ ಐವತ್ತು ಕೋಟಿ ರೂಪಾಯಿಯಷ್ಟು ಅನುದಾನ ದೊರಕಿದೆ.
ಕೇಂದ್ರದ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಕ್ಕೆ ಸಿಕ್ಕ ಅನುದಾನದ ವಿವರ ಹೀಗಿದೆ:
*ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ 300 ಕೋಟಿ ರೂಪಾಯಿ ಅನುದಾನ
*ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಗೆ 157.50 ಕೋಟಿ ರೂಪಾಯಿ ಅನುದಾನ
*ರಾಜ್ಯದ ನಗರ ಕುಡಿಯುವ ನೀರಿನ ಯೋಜನೆಗೆ 217.83 ಕೋಟಿ ರೂಪಾಯಿ ಅನುದಾನ
*ಜಲಾನಯನ ಅಭಿವೃದ್ಧಿಯ 2ನೇ ಹಂತದ ಯೋಜನೆಗೆ 131.33 ಕೋಟಿ ರೂಪಾಯಿ ಅನುದಾನ
*ಬೆಂಗಳೂರಿನ ಯುನಾನಿ ಮೆಡಿಸಿನ್ ಸಂಸ್ಥೆಗೆ 15 ಕೋಟಿ ರೂಪಾಯಿ ಅನುದಾನ
*ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಗೆ 55 ಕೋಟಿ ರೂಪಾಯಿ ಅನುದಾನ
*ಬೆಂಗಳೂರಿನ ಐಐಎಸ್ ಸಿ ಸಂಸ್ಥೆಗೆ 179 ಕೋಟಿ ರೂಪಾಯಿ ಅನುದಾನ