ನಾನು ಸಿಎಂ ಆದರೆ ರಾಜ್ಯದ ಇತಿಹಾಸವೇ ಬದಲಾವಣೆಯಾಗುತ್ತದೆ: ಯತ್ನಾಳ್
Team Udayavani, Dec 14, 2021, 11:58 AM IST
ಸುವರ್ಣಸೌಧ (ಬೆಳಗಾವಿ): ರಾಜ್ಯದ ಸಚಿವ ಸಂಪುಟದಲ್ಲಿ ಕೇವಲ ನಾಲ್ಕು ಸ್ಥಾನವಲ್ಲ, ನಿಷ್ಕ್ರಿಯ ಸಚಿವರನ್ನೆಲ್ಲಾ ಬದಲಾವಣೆ ಮಾಡಬೇಕು. ನಾನು ಮುಖ್ಯಮಂತ್ರಿಯಾದರೆ ರಾಜ್ಯದ ಇತಿಹಾಸವೇ ಬದಲಾವಣೆಯಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಸಚಿವ ಸಂಪುಟದಲ್ಲಿ ಭಾರೀ ಬದಲಾವಣೆಯಾಗುತ್ತದೆಂದು ಹೇಳಿದ್ದೆ. ಪರಿಷತ್ ಫಲಿತಾಂಶ ನಂತರ ಮುಂದಿನ ಬೆಳವಣಿಗೆಯಾಗುತ್ತದೆ. ವಂಶ ಪಾರಂಪರ್ಯ ಬಿಜೆಪಿಯಲ್ಲಿ ನಡೆಯಲ್ಲ. ಕುಟುಂಬದವರೆಲ್ಲಾ ಶಾಸಕ, ಸಂಸದರಾದರೆ ದೇವೇಗೌಡರ ಕುಟುಂಬದ ಹಾಗೆ ಆಗಿಬಿಡುತ್ತದೆ ಎಂದರು.
ಇದನ್ನೂ ಓದಿ:ಮಂಡ್ಯ: ಚುನಾವಣಾ ಸಿಬ್ಬಂದಿ ಹಾಗೂ ಏಜೆಂಟ್ ಗಳ ನಡುವೆ ಮಾತಿನ ಚಕಮಕಿ!
ಮತ್ತೆ ಸಿಎಂ ಬದಲಾವಣೆಯು ಕಾಂಗ್ರೆಸ್ ಮಾಡಿರುವ ಸುದ್ದಿ. ಬೊಮ್ಮಾಯಿ ಸಿಎಂ ಆಗಿ ಇನ್ನೂ ನೂರು ದಿನವಾಗಿದೆ ಅಷ್ಟೇ. ತೃಪ್ತಿ, ಅತೃಪ್ತಿ ಎಲ್ಲಾ ಆಮೇಲೆ ಗೊತ್ತಾಗುತ್ತದೆ. ಭ್ರಷ್ಟಾಚಾರವೆಲ್ಲಾ ಎಲ್ಲಾ ಕಡಿಮೆ ಆಗುತ್ತಿದೆ. ಸೂಪರ್ ಸಿಎಂ ಇದ್ದಾಗ ಭ್ರಷ್ಟಾಚಾರವಿತ್ತು. ಈಗ ಆ ಪ್ರಮಾಣದಲ್ಲಿ ಇಲ್ಲ ಎಂದು ಪರೋಕ್ಷವಾಗಿ ಬಿಎಸ್ ವೈ ಕುಟುಂಬದ ಮೇಲೆ ಯತ್ನಾಳ್ ಹರಿಹಾಯ್ದರು.