ಕೈ ಕಾಲು ಕತ್ತರಿಸ್ತೇನೆ ; ಅಧಿಕಾರಿಗೆ ಕೈ ಶಾಸಕನ ಧಮ್ಕಿ!
Team Udayavani, Jan 6, 2019, 6:34 AM IST
ಭದ್ರಾವತಿ: ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರಿಗೆ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರು ಕೈ ಕಾಲು ಕತ್ತರಿಸಿ ಹಾಕುತ್ತೇನೆ ಎಂದು ಧಮ್ಕಿ ಹಾಕಿದ ವಿಡಿಯೋ ಬಹಿರಂಗವಾಗಿದೆ.
ಕೊಡ್ಲಿಕೆರೆ ಸಮೀಪ ಅರಣ್ಯದಲ್ಲಿ ದೇವಸ್ಥಾನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಅರಣ್ಯ ಅಧಿಕಾರಿಯೊಬ್ಬರಿಗೆ ಪೋನ್ ಮೂಲಕ ಈ ಬೆದರಿಕೆ ಹಾಕಲಾಗಿದೆ.
ನೊಟೀಸ್ ಯಕೆ ಕೊಟ್ಟೆ,ಇವತ್ತು ಪೂಜೆ ಮಾಡಿದ್ದಾರೆ, ಇನ್ಮೇಲೆ ಯಾರೂ ಅಡ್ಡ ಬರಬಾರದು, ಬಂದ್ರೆ ಕೈ ಕಾಲು ಕತ್ತರಿಸಿ ಹಾಕುತ್ತೇನೆ ಎಂದು ಫೋನ್ನಲ್ಲಿ ಆವಾಜ್ ಹಾಕಿದ್ದಾರೆ.
ಅರಣ್ಯ ಪ್ರದೇಶ ಅತಿಕ್ರಮಿಸದೆ ಇರುವಂತೆ ಅಧಿಕಾರಿ ನೊಟೀಸ್ ನೀಡಿದ್ದರು. ಈ ಬಗ್ಗೆ ಸ್ಥಳೀಯರು ಶಾಸಕರಿಗೆ ದೂರು ನೀಡಿದ್ದರು. ಆ ಹಿನ್ನಲೆಯಲ್ಲಿ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.