34 ಕೆಎಎಸ್ ಅಧಿಕಾರಿಗಳಿಗೆ ಐಎಎಸ್ ಬಡ್ತಿ
Team Udayavani, Oct 10, 2017, 9:00 AM IST
ಬೆಂಗಳೂರು: ರಾಜ್ಯದ ಹಿರಿಯ ಕೆಎಎಸ್ ಅಧಿಕಾರಿಗಳಿಗೆ ಐಎಎಸ್ಗೆ ಬಡ್ತಿ ಭಾಗ್ಯ ದೊರೆತಿದೆ. ಸೋಮವಾರ ನಡೆದ
ಯುಪಿಎಸ್ಸಿ ಸಮಿತಿ ಸಭೆಯಲ್ಲಿ ಮಹತ್ವದ ತೀರ್ಮಾನವಾಗಿದ್ದು, ಒಂದೇ ಬಾರಿಗೆ 34 ಕನ್ನಡಿಗ ಅಧಿಕಾರಿಗಳು ಐಎಎಸ್ ಶ್ರೇಣಿಗೆ
ಬಡ್ತಿ ಹೊಂದಲಿದ್ದಾರೆ.
ಡಾ. ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ಅಧಿಕಾರಿಗಳು ವಿಚಾರಣೆ ಹೆಸರಿನಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ಕಾರ್ಯದರ್ಶಿ ಎಚ್. ಬಸವರಾಜೇಂದ್ರ, ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಆಪ್ತ ಕಾರ್ಯದರ್ಶಿ ಡಾ. ಗೋಪಾಲ ಹೆಚ್. ಎನ್. ಬೆಂಗಳೂರು ನಗರಾಭಿವೃದ್ಧಿ ಸಚಿವ ಜಾರ್ಜ್ ಅವರ ಆಪ್ತ ಕಾರ್ಯದರ್ಶಿ ಡಾ. ಶಿವಶಂಕರ ಎನ್. ಸಚಿವ ತನ್ವಿರ್ ಸೇಠ್ ಆಪ್ತ ಕಾರ್ಯದರ್ಶಿ ರವಿಕುಮಾರ್ ಎಂ.ಆರ್. ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಆಪ್ತ ಕಾರ್ಯದರ್ಶಿ ವೈ.ಎಸ್. ಪಾಟೀಲ್ ಐಎಎಸ್ ಗೆ ಬಡ್ತಿ ಪಡೆದ ಪ್ರಮುಖ ಅಧಿಕಾರಿಗಳು.
ಇನ್ನು ಡಾ. ಬಿ.ಸಿ. ಸತೀಶ್, ಡಾ. ಅರುಂಧತಿ ಚಂದ್ರಶೇಖರ, ಡಾ. ರವಿ ಎಂ. ಆರ್., ರವೀಂದ್ರ ಪಿ.ಎನ್. ಜ್ಯೋತಿ ಕೆ., ಮೀನಾ ನಾಗರಾಜ ಸಿ.ಎನ್., ಅಕ್ರಂ ಪಾಷಾ, ಕೆ. ಲೀಲಾವತಿ, ಪಿ. ವಸಂತಕುಮಾರ್, ಕರಿಗೌಡ, ಶಿವಾನಂದ ಕಾಪಸಿ, ಗಂಗೂಬಾಯಿ ರಮೇಶ್ ಮಾನಕರ್, ಕವಿತಾ ಮನ್ನಿಕೇರಿ, ಆರ್. ಎಸ್. ಪೆದ್ದಪ್ಪಯ್ಯ, ಜಿ.ಸಿ. ವೃಷಭೇಂದ್ರ ಮೂರ್ತಿ, ಡಾ. ಕೆ. ಹರೀಶ್ ಕುಮಾರ್, ಎಂ.ಬಿ. ರಾಜೇಶ್ಗೌಡ, ಮಹಾಂತೇಶ್ ಬೀಳಗಿ, ರಮೇಶ್ ಕೆ.ಎನ್. ಎಸ್. ಹೊನ್ನಾಂಬ, ಆರ್. ಲತಾ, ಕೆ. ಶ್ರೀನಿವಾಸ, ಎಂ.ಎಸ್. ಅರ್ಚನಾ, ಕೆ. ಎ. ದಯಾನಂದ, ಜಿ. ಜಗದೀಶ್, ಕೆ. ಎಂ. ಜಾನಕಿ, ಸಿ. ಸತ್ಯಭಾಮ, ಕೆ.ಎಸ್. ಲತಾಕುಮಾರಿಗೆ ಐಎಎಸ್ ಬಡ್ತಿ ಲಭಿಸಿದೆ.
ರಾಜ್ಯ ಸರ್ಕಾರ 56 ಜನರ ಪಟ್ಟಿಯನ್ನು ಸಿದ್ದಪಡಿಸಿ ಕೇಂದ್ರ ಲೋಕಸೇವಾ ಆಯೋಗಕ್ಕೆ ಕಳುಹಿಸಿ ಕೊಟ್ಟಿತ್ತು. ಉತ್ತರ
ಭಾರತದ ಐಎಎಸ್ ಅಧಿಕಾರಿಗಳ ಲಾಬಿಯಿಂದಾಗಿ ಕನ್ನಡಿಗ ಅಧಿಕಾರಿಗಳು ಐಎಎಸ್ಗೆ ಬಡ್ತಿ ಪಡೆಯಲು ನಿರಂತರ
ಹೋರಾಟ ನಡೆಸಬೇಕಾಯಿತು. ಅವರ ಹೋರಾಟದ ಫಲವಾಗಿ ನಾಲ್ಕು ವರ್ಷಗಳ ನಂತರ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿ ಎನ್ನುವಂತೆ 34 ಜನ ಹಿರಿಯ ಕೆಎಎಸ್ ಅಧಿಕಾರಿಗಳು ಐಎಎಸ್ ಶ್ರೇಣಿಗೇರುವಂತಾಗಿದೆ.
ರಾಜಮ್ಮ ಚೌಡರೆಡ್ಡಿಬಡ್ತಿಗೆ ಬ್ರೇಕ್ ?
ಬಿಡಿಎ ಅಧಿಕಾರಿಯಾಗಿದ್ದ ರಾಜಮ್ಮ ಎ. ಚೌಡರೆಡ್ಡಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖಾ ಹಂತದಲ್ಲಿರುವುದರಿಂದ ಅವರಿಗೆ ದೊರೆಯಬೇಕಿದ್ದ ಬಡ್ತಿಯನ್ನು ತಡೆ ಹಿಡಿಯಲಾಗಿದೆ. ಕ್ಯಾಪ್ಟನ್ ಡಾ. ರಾಜೇಂದ್ರ ಅವರಿಗೆ ಕೋರ್ಟ್ ಆದೇಶದ ಮೂಲಕವೇ ಐಎಎಸ್ ಬಡ್ತಿ ನೀಡಲಾಗಿತ್ತು. ಉಳಿದ ಅಧಿಕಾರಿಗಳ ಬಡ್ತಿಗೆ ಇನ್ನೂ ಅರ್ಹತೆ ಪಡೆದಿಲ್ಲ ಎನ್ನಲಾಗಿದೆ.
ಕುರುಬರೇ ಇಲ್ವಲ್ಲಾ ?
ಹಿರಿಯ ಕೆಎಎಸ್ ಅಧಿಕಾರಿಗಳ ಪಟ್ಟಿಯನ್ನು ಐಎಎಸ್ ಶ್ರೇಣಿಗೆ ಬಡ್ತಿ ನೀಡಲು ಶಿಫಾರಸು ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳ ಪಟ್ಟಿಯನ್ನು ತೋರಿಸಲಾಗಿತ್ತು. ಆ ಪಟ್ಟಿ ನೋಡಿ ಇದರಲ್ಲಿ ಕುರುಬರು ಎಷ್ಟಿದ್ದಾರೆ ಎಂದು ಹಾಸ್ಯದ ಧಾಟಿಯಲ್ಲಿ ವಿವರ ಕೇಳಿ, ಕುರುಬ ಅಧಿಕಾರಿಗಳೇ ಕಾಣುತ್ತಿಲ್ಲ ಎಂದು ಪ್ರಶ್ನಿಸಿದ್ದರಂತೆ. ಮುಖ್ಯಮಂತ್ರಿಗಳ ತಮಾಶೆಯ
ಮಾತನ್ನು ಸರಿಯಾಗಿ ಗ್ರಹಿಸದ ಅಧಿಕಾರಿಗಳು, ಸೇವಾ ಹಿರಿತನದ ಮೇಲೆ ಐಎಎಸ್ ಶ್ರೇಣಿಗೆ ಬಡ್ತಿ ಸಿಗುತ್ತದೆ. ಹೀಗಾಗಿ ಹಿರಿತನದ ಆಧಾರದಲ್ಲಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದರಂತೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು