ಜಾತಿ ಹೆಸರೇಳಿ ವೋಟ್ ಕೇಳಿದ್ರೆ ಜನ ಒದಿತಾರೆ
Team Udayavani, Jun 17, 2019, 3:00 AM IST
ಕೊಪ್ಪಳ: ಚುನಾವಣೆಯಲ್ಲಿ ಜಾತಿಗೀತಿ ನಡೆಯಲ್ಲ. ಒಂದು ವೇಳೆ ಜಾತಿ ಹೆಸರೇಳಿ ವೋಟು ಕೇಳಿದ್ರೆ ಜನ ಒದಿತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು. ನಗರದಲ್ಲಿ ನಡೆದ ಸಂಸದ ಸಂಗಣ್ಣ ಕರಡಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಕಾಂಗ್ರೆಸ್ ಸ್ವಾತಂತ್ರ್ಯ ಬಂದಾಗಿನಿಂದ ಜಾತಿ ಹೇಳೇ ಚುನಾವಣೆ ಮಾಡಿಕೊಂಡು ಬಂದಿದೆ.
ಅಭಿವೃದ್ಧಿ ಮಾಡಿಲ್ಲ. ಜಾತಿ ಹೆಸರು ಬಳಸಿ ಜನರಿಗೆ ದ್ರೋಹ ಮಾಡಿದ ಕಾಂಗ್ರೆಸ್ಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಜನ ನಮಗೆ ಜಾತಿ ನೋಡದೇ ಮತ ನೀಡಿದ್ದು, ಇದನ್ನು ಕಾಂಗ್ರೆಸ್ ಮರ್ಯಾದೆಯಿಂದ ಸೋಲೊಪ್ಪಿಕೊಳ್ಳಲಿ ಎಂದು ಹೇಳಿದರು.
ಬೇಕಿದ್ದರೆ ಡಿಕೆಶಿ ಕನಕಪುರ ಆಸ್ತಿ ಮಾರಲಿ: ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, 3 ಸಾವಿರ ಕೋಟಿ ಬೆಲೆ ಬಾಳುವ ಭೂಮಿಯನ್ನು ಸರ್ಕಾರ ಜಿಂದಾಲ್ಗೆ ಕೊಡಲು ಮುಂದಾಗಿದೆ. ಇದಕ್ಕೆ ಅವರ ಪಕ್ಷದವರೇ ವಿರೋಧಿಸಿದ್ದಾರೆ.
ಆದರೆ ಡಿಕೆಶಿ ಜಿಂದಾಲ್ ಪರ ವಕಾಲತು ಮಾಡಿದ್ದಾರೆ. ಸರ್ಕಾರದ ಆಸ್ತಿ ಮಾರುವ ಹಕ್ಕು ಇವರಿಗೆ ಕೊಟ್ಟೋರ್ಯಾರು? ಬೇಕಿದ್ದರೆ ಅವರು ತಮ್ಮ ಕನಕಪುರದ ಸ್ವಂತ ಆಸ್ತಿ ಮಾರಾಟ ಮಾಡಲಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ