1990ರಲ್ಲಿ ಅಯೋಧ್ಯೆ ಪ್ರವೇಶಿಸಲು ಪಣತೊಟ್ಟ ಕನ್ನಡಿಗರು


Team Udayavani, Nov 10, 2019, 3:08 AM IST

1990ayo

ಬೆಂಗಳೂರು: ರಾಮರಥ ಯಾತ್ರೆಗೆ ಕರೆ ಕೊಟ್ಟ ಬೆನ್ನಲ್ಲೇ ದೇಶದ ಮೂಲೆ ಮೂಲೆಗಳಿಂದ ಸಹಸ್ರಾರು ಮಂದಿ ಗುಂಪು ಗುಂಪಾಗಿ ಯಾತ್ರೆಗೆ ಮುಂದಾಗಿದ್ದರು. ಈ ವೇಳೆ ರಾಜ್ಯದಿಂದಲೂ ಅಂದಿನ ಯುವಕರು ರಾಮಜನ್ಮಭೂಮಿಗಾಗಿ ಯಾತ್ರೆಗೆ ಕೈ ಜೋಡಿಸಿದ್ದರು. ರಾಮ ಜನ್ಮಭೂಮಿ ವಿವಾದ ತೀವ್ರತೆ ಪಡೆದುಕೊಳ್ಳುತಿದ್ದಂತೆ ದೇಶದೆಲ್ಲೆಡೆ ಕಟ್ಟೆಚ್ಚರ ವಹಿಸಲಾಯಿತು. ಹೀಗಾಗಿ, ಯಾತ್ರಿಗಳ ಗುಂಪುಗಳನ್ನು ಅಲ್ಲಲ್ಲೇ ತಡೆಯುವ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡಲಾಗುತಿತ್ತು.

1990ರ ಡಿ.25ಕ್ಕೆ ಅಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಲಾಲ್‌ಕೃಷ್ಣ ಅಡ್ವಾಣಿ ಅವರು ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ರಾಮ ಜನ್ಮಭೂಮಿ ರಥಯಾತ್ರೆಗೆ ಕರೆ ಕೊಟ್ಟರು. ಅದೇ ತಿಂಗಳ 28ರಂದು ರಾಜ್ಯದಿಂದ ಕೆಲ ತಂಡಗಳು ರಥಯಾತ್ರೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಯಿತು. ಈ ಹೊತ್ತಿಗಾಗಲೇ ಉತ್ತರ ಭಾರತದಲ್ಲಿ ರಥಯಾತ್ರೆಯ ಕಿಚ್ಚು ಉತ್ತುಂಗದಲ್ಲಿತ್ತು.

ಲಾಲೂ ಪ್ರಸಾದ್‌ ಯಾದವ್‌ ನೇತೃತ್ವದ ಬಿಹಾರ ಸರ್ಕಾರ ಅಡ್ವಾಣಿ ಅವರನ್ನು ಬಂಧಿಸಲು ಮುಂದಾಗಿತ್ತು. ಅದಾಗಲೇ ಒಂದೂವರೆ ಲಕ್ಷಕ್ಕೂ ಅಧಿಕ ಯುವಕರು ಮತ್ತು ವಿಎಚ್‌ಪಿ ಕರಸೇವಕರು ದೇಶದೆಲ್ಲೆಡೆ ಪಾದಯಾತ್ರೆ ಆರಂಭಿಸಿದ್ದರು. ದೇಶದ ಪ್ರಮುಖ ದೇವಾಲಯಗಳ ಸುತ್ತಮುತ್ತ ಪಾದಯಾತ್ರಿಗಳಿಗೆ ಉಳಿದುಕೊಳ್ಳಲು ಮತ್ತು ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆಗಳನ್ನು ಕರಸೇವಕರು ಮತ್ತು ಸ್ವಯಂ ಸೇವಕರು ನೋಡಿಕೊಳ್ಳುತ್ತಿದ್ದರು.

ಹೀಗಿದ್ದರೂ ರಾಜ್ಯದ ನಾಲ್ಕು ಯುವಕರು ಏನೇ ಆದರೂ ನಾವು ರಾಮ ಜನ್ಮಭೂಮಿಗೆ ಪ್ರವೇಶಿಸುವ ಯಾತ್ರೆಯಲ್ಲಿ ಭಾಗವಾಗಬೇಕೆಂದು ಪಣತೊಟ್ಟು ಅಯೋಧ್ಯೆ ರೈಲು ಹತ್ತಿ ಹೊರಟರು. ಎಚ್‌ಎಎಲ್‌ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ಬಿ.ಎಲ್‌.ಮೂರ್ತಿ, ಕೊಡಗು ಮೂಲದ ಸೋಮೇಶ್‌, ಹೊಸಕೋಟೆಯ ಶಂಕರ್‌ ನಿಕಮ್‌, ಕೆಎಸ್‌ಆರ್‌ಟಿಸಿಯಲ್ಲಿ ಕಾರ್ಯ ನಿರ್ವಹಿಸುತಿದ್ದ ಸೂರ್ಯನಾರಾಯಣ ಒಂದು ತಂಡವಾಗಿ 1990ರ ಡಿಸೆಂಬರ್‌ 28ಕ್ಕೆ ರಥಯಾತ್ರೆಗೆ ಹೊರಡುತ್ತಾರೆ. 30ನೇ ತಾರೀಕು ಈ ತಂಡ ನೇರವಾಗಿ ಹೋರಾಟದ ಕೇಂದ್ರ ಸ್ಥಳ ಅಯೋಧ್ಯೆಗೆ ತಲುಪಿ, ಅಶೋಕ್‌ ಸಿಂಘಾಲ್‌ ಅವರನ್ನು ಭೇಟಿಯಾದ ದಿನಗಳನ್ನು ನೆನಪು ಬಿ.ಎಲ್‌. ಮೂರ್ತಿ “ಉದಯವಾಣಿ’ ಜತೆ ನೆನಪಿಸಿಕೊಂಡರು.

“ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಇಡೀ ಅಯೋಧ್ಯೆಗೆ ಪೊಲೀಸ್‌ ಸರ್ಪಗಾವಲು ನಿಯೋಜನೆ ಮಾಡಿದ್ದರು. ಹೀಗಾಗಿ, ಗೋರಖ್‌ ಪುರದಿಂದ ಅಲಹಾಬಾದ್‌( ಇಂದಿನ ಪ್ರಯಾಗ್‌ರಾಜ್‌) ರಸ್ತೆಯುದ್ದಕ್ಕೂ ಒಂದು ಕಡೆ, ಪೊಲೀಸ್‌ ಇನ್ನೊಂದು ಕಡೆ ಕರಸೇವಕರು ನಿಂತಿದ್ದರು. ಈ ವೇಳೆ ಶತಾಯ ಗತಾಯ ರಾಮ ಜನ್ಮಭೂಮಿ ಪ್ರವೇಶಿಸಬೇಕು ಎಂದು ಪಣತೊಟ್ಟಿದ್ದ ಅಶೋಕ್‌ ಸಿಂಘಾಲ್‌ ನೇತೃತ್ವದ 10 ಸಾವಿರಕ್ಕೂ ಅಧಿಕ ಯುವಕರ ತಂಡ ಕೆಲ ನಿಮಿಷಗಳ ಕಾಲ ದಿಕ್ಕು ತೋಚದ ಪರಿಸ್ಥಿತಿಗೆ ಸಿಲುಕಿದ್ದರು’ ಎಂದರು ಮೂರ್ತಿ.

ಕೆಲ ನಿಮಿಷಗಳ ಕಾಲ ಯೋಜನೆ ರೂಪಿಸಿದ ಅಶೋಕ್‌ ಸಿಂಘಾಲ್‌ ಪಡೆ, ಏಕಾಏಕಿ ಮಂದಿರ ಪ್ರವೇಶಕ್ಕೆ ಮುಂದಾಗಲು ತೀರ್ಮಾನ ಮಾಡಿತು. ಯೋಜನೆಯಂತೆ ಕಾರ್ಯೋನ್ಮುಖರಾದ ವಿಶ್ವ ಹಿಂದು ಪರಿಷತ್‌ನ ತಂಡ ಮಂದಿರ ಪ್ರವೇಶಕ್ಕೆ ಮುಂದಾಗುತಿದ್ದಂತೆ ಪೊಲೀಸ್‌ ಮತ್ತು ಪ್ಯಾರಾ ಮಿಲಿಟರಿ ಫೋರ್ಸ್‌ ಲಾಠಿ ಬೀಸಿದರು. ಪೊಲೀಸರು ಬೀಸಿದ ಲಾಠಿ ಏಟು ಅಶೋಕ್‌ ಸಿಂಘಾಲ್‌ ತಲೆಗೆ ಬೀಳುತ್ತಿದ್ದಂತೆ ರೊಚ್ಚಿಗೆದ್ದ ಕೊಡಗಿನ ಸೋಮೇಶ್‌ ಪೊಲೀಸರ ವಿರುದ್ಧ ವಾಗ್ವಾದಕ್ಕೆ ಇಳಿದ ಸಂಗತಿಯನ್ನು ಬಿ.ಎಲ್‌.ಮೂರ್ತಿ ಹಂಚಿಕೊಂಡರು.

ಸುಮಾರು 3-4 ಗಂಟೆಗಳ ಕಾಲ ನಡೆದ ಈ ಸಂಘರ್ಷದಲ್ಲಿ ಉತ್ತರ ಪ್ರದೇಶದ ಸರ್ಕಾರ ಮೇಲುಗೈ ಸಾಧಿಸಿತ್ತು. ಮೊದಲ ಯತ್ನದಲ್ಲೇ ವಿಫ‌ಲವಾದ ತಂಡ ಪಟ್ಟು ಬಿಡದೆ ಅಯೋಧ್ಯೆ ನಗರದಲ್ಲೇ ಬೀಡು ಬಿಟ್ಟರು. ಈ ವೇಳೆ ಅಲ್ಲಿನ ಸರ್ಕಾರ ರಥಯಾತ್ರಿಗಳನ್ನು ವಾಪಸ್ಸು ತಮ್ಮ ಊರುಗಳಿಗೆ ತೆರಳಲು ಮನವಿ ಮಾಡಿದರೂ, ನಾವು ರಾಮಲಲ್ಲಾ ಸ್ಥಳವನ್ನು ಪ್ರವೇಶಿಸದೇ ಅಯೋಧ್ಯೆ ಬಿಟ್ಟು ಹೋಗುವುದಿಲ್ಲ ಎಂದು ಪಣ ತೊಟ್ಟಿದ್ದರು.

ರಣಚಳಿಗೆ ಸ್ಪಂದಿಸಿದ ದಾನಿಗಳು: ಆ ಸ್ಥಳದಲ್ಲಿ ಪ್ರವೇಶ ವಿಫ‌ಲವಾದರೂ ಒಂದು ವಾರಗಳ ಕಾಲ ಅಯೋಧ್ಯೆಯಲ್ಲಿ ಕಳೆದ ಅನುಭವವನ್ನು ಹಂಚಿಕೊಂಡ ಮೂರ್ತಿ, ಅಯೋಧ್ಯೆ ನಗರದ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಯಾತ್ರಿಗಳಿಗೆ ವಸತಿ ಮತ್ತು ಊಟಕ್ಕಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿದ್ದವರ ಬಳಿ ಹೊದಿಕೆಗಳು ಮತ್ತು ಹೆಚ್ಚಿನ ಬಟ್ಟೆಗಳಿರಲಿಲ್ಲ. ಈ ವಿಷಯ ಅಲ್ಲಿನ ಕರಸೇವಕರಿಗೆ ತಿಳಿಸುತಿದ್ದಂತೆ ದಾನಿಗಳು 3-4 ಟ್ರಕ್‌ಗಳಲ್ಲಿ ಸ್ವೆಟರ್‌ ಮತ್ತು ಹೊದಿಕೆಗಳನ್ನು ಪೂರೈಕೆ ಮಾಡಿದರು. ಇನ್ನು ಸಾಕಷ್ಟು ಯಾತ್ರಿಗಳಿಗೆ ಕೆಮ್ಮು ಹೆಚ್ಚಾಗಿ ಕಾಣಿಸಿಕೊಂಡಿತ್ತು. ಕೂಡಲೇ ಎರಡು ಡ್ರಮ್‌ ಗಳ ತುಂಬಾ ಕೆಮ್ಮಿನ ಸಿರಪ್‌ ಪೂರೈಕೆ ಮಾಡಿದ್ದನ್ನು ನೆನಪಿಸಿಕೊಂಡರು.

ಟಾಪ್ ನ್ಯೂಸ್

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

aaa

ನೇಹಾ ಕಗ್ಗೊಲೆ ಆಕಸ್ಮಿಕ, ವೈಯಕ್ತಿಕ ಸರಕಾರದ ಹೇಳಿಕೆ ವಿವಾದ, ಆಕ್ರೋಶ

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.