ದಲಿತರಲ್ಲಿ ಸಿಎಂ ಆಗಲಿಲ್ಲ ಎಂಬ ಕೊರಗು ಇರೋದು ನಿಜ : ಆರ್.ಧ್ರುವನಾರಾಯಣ್
Team Udayavani, Jul 3, 2021, 4:36 PM IST
ಮೈಸೂರು : ದಲಿತರಲ್ಲಿ ನಮ್ಮವರೊಬ್ಬರು ಸಿಎಂ ಆಗಲಿಲ್ಲ ಎಂಬ ಕೊರಗು ಇರೋದು ನಿಜ, ದಲಿತರಲ್ಲಿ ಅರ್ಹತೆ, ಸಿನಿಯಾರಿಟಿ ಎಲ್ಲಾ ಮುಖ್ಯ, ನನಗೆ ತಿಳಿದಂತೆ ನಮ್ಮ ಸಮುದಾಯದಲ್ಲಿ ಮಲ್ಲಿಕಾರ್ಜುನ ಖರ್ಗೆ ದೊಡ್ಡಮಟ್ಟದಲ್ಲಿದ್ದಾರೆ. ಸಹಜವಾಗಿ ಒಬ್ಬ ಸೀನಿಯರ್ ಮೋಸ್ಟ್ ಸಿಎಂ ಆಗುವುದರಲ್ಲಿ ತಪ್ಪೇನಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಪರ ಆರ್.ಧ್ರುವನಾರಾಯಣ್ ಬ್ಯಾಟ್ ಬೀಸಿದ್ದಾರೆ.
ಅವರು ಸಾಕಷ್ಟು ಬಾರಿ ಸಿಎಂ ಆಗಬೇಕಿತ್ತು. ಆಗ ಬಹುಮತ ಬರಲಿಲ್ಲ. ಹಿರಿತನದಲ್ಲಿ ನಾವೆಲ್ಲಾ ಬಹಳ ಜೂನಿಯರ್ ಇದ್ದೀವಿ.
ನಾವೆಲ್ಲಾ ಸಿಎಂ ಹುದ್ದೆ ಆಸೆ ಪಟ್ಟವರಲ್ಲ. ಪಕ್ಷದಲ್ಲಿ ಕಾರ್ಯಾಧ್ಯಕ್ಷರಂತೆ ದೊಡ್ಡ ಹುದ್ದೆ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ.
ದಲಿತ ಮುಖ್ಯಮಂತ್ರಿ ಕೂಗು ಅಪ್ರಸ್ತುತ. ಕಾಂಗ್ರೆಸ್ ದಲಿತರಿಗೆ ಕೊಟ್ಟಷ್ಟು ಯಾವ ಪಕ್ಷವೂ ಕೊಟ್ಟಿಲ್ಲ. ಕೇಂದ್ರದಲ್ಲಿ ಸಂಪುಟ ಪುನರ್ ರಚನೆ ಆಗ್ತಿದೆ. ಐದು ಮಂದಿ ದಲಿತ ಸಂಸದರಿದ್ದಾರೆ ಬಿಜೆಪಿ ಯಾಕೆ ಸಚಿವರನ್ನಾಗಿ ಮಾಡ್ತಿಲ್ಲ. ಕಾಂಗ್ರೆಸ್ ಖರ್ಗೆ ಪರಾಜಿತರಾದರೂ ರಾಜ್ಯಸಭೆ ಶಾಸಕಾಂಗ ನಾಯಕರನ್ನಾಗಿ ಮಾಡಿದೆ ಎಂದರು.
ಮುನಿಯಪ್ಪಗೆ ಸಚಿವ ಸ್ಥಾನ ಕೊಟ್ಟಿದೆ. ಪರಮೇಶ್ವರ್ ರಾಜ್ಯದಲ್ಲಿ ಡಿಸಿಎಂ ಆದ್ರು. ಹಿಂದೆ ಸಿಎಂ ಆಗುವ ಅವಕಾಶ ದಲಿತರಿಗೆ ಇತ್ತು. 2008 ರಲ್ಲಿ ಬಹುಮತ ಬಂದಿದ್ರೆ ಖರ್ಗೆ ಸಿಎಂ ಆಗ್ತಿದ್ರು. 2013 ರಲ್ಲಿ ಪರಮೇಶ್ವರ್ ಗೆದ್ದಿದ್ರೆ, ಪರಮೇಶ್ವರ್ ಸಿದ್ದರಾಮಯ್ಯ ಇಬ್ಬರಿಗೂ ಅಧಿಕಾರ ಹಂಚಿಕೆ ಆಗ್ತಿತ್ತು. ಕಾಂಗ್ರೆಸ್ ಯಾವತ್ತು ದಲಿತರಿಗೆ ಅನ್ಯಾಯ ಮಾಡಿಲ್ಲ. ದಲಿತರಲ್ಲಿ ನಮ್ಮವರೊಬ್ಬರು ಸಿಎಂ ಆಗಲಿಲ್ಲ ಎಂಬ ಕೊರಗು ಇದೆ, ಅದಂತೂ ನಿಜ ಎಂದರು.
ಸಮಯ ಸಂದರ್ಭ ಬಂದಾಗ ಅವಕಾಶ ಸಿಗುತ್ತೆ. ಸಾಮಾಜಿಕ ನ್ಯಾಯ ಕೊಟ್ಟಿರೋದೆ ಕಾಂಗ್ರೆಸ್. ಎಲ್ಲಾ ಸಮಾಜದವರಿಗೂ ಅವಕಾಶ ಸಿಕ್ಕಿದೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ತೀರ್ಮಾನಿಸಿಲ್ಲ. ನಾನು ಲೋಕಸಭೆ ಚುನಾವಣೆಯಲ್ಲಿ ಕೇವಲ 1800 ಮತಗಳ ಅಂತರದಿಂದ ಸೋತಿದ್ದೇನೆ. ಮುಂದಿನ ಗುರಿ ಲೋಕಸಭಾ ಚುನಾವಣೆಗೆ. ಆಕಾಂಕ್ಷಿ ಅಷ್ಟೇ ಅಭ್ಯರ್ಥಿಯೂ ನಾನೆ ಅಲ್ಲ. ಕಾಂಗ್ರೆಸ್ ನಲ್ಲಿ ಬಿಫಾರಂ ಸಿಕ್ಕಾಗಲೇ ಗ್ಯಾರೆಂಟಿ ಎಂದು ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ