ಮಡಿಕೇರಿಯ ಮುಸ್ಲಿಂ ಮಹಿಳೆಯ ಮೇಲೆ ಕಾಳಿ ಆವಾಹನೆ !!!
Team Udayavani, Sep 8, 2017, 12:39 PM IST
ಮಡಿಕೇರಿ: ಶಾಲಾ ಮುಖ್ಯಸ್ಥೆಯೊಬ್ಬರು ತನ್ನ ಮೇಲೆ ಮಹಾಕಾಳಿ ಆವಾಹನೆಯಾಗಿದೆ ಎಂದು ಕೈಯಲ್ಲಿ ತ್ರಿಶೂಲ ಹಿಡಿದು ವಿಚಿತ್ರವಾಗಿ ವರ್ತಿಸಿದ ಘಟನೆ ಕುಶಾಲನಗರದ ಪಟ್ಟಣ ಪಂಚಾಯತಿಯ ಎದುರು ಶುಕ್ರವಾರ ನಡೆದಿದೆ.
ಬ್ರಿಲಿಯಂಟ್ ಬ್ಲೂಮ್ ಎಂಬ ಶಾಲೆಯ ಮುಖ್ಯಸ್ಥೆಯಾಗಿರುವ ಮುಬಿನ್ ತಾಜ್ ಎಂಬ ಮಹಿಳೆ ವಿಚಿತ್ರ ವರ್ತನೆ ತೋರಿದ್ದು , ಮೈಮೇಲೆ ದೇವಿ ಬಂದಂತೆ ಮುಖಭಾವ ತೋರಿ ನಮ್ಮ ಶಾಲೆಯ ಕೊಠಡಿಯ ಭೂಮಿಯ ಆಳದಲ್ಲಿ 7 ಅಡಿಯಷ್ಟು ದೊಡ್ಡದಾದ ಮಹಾಕಾಳಿಯ ವಿಗ್ರಹವಿದೆ. 10 ಕೈಗಳಿವೆ . ಆ ವಿಗ್ರಹ ಮೇಲೆಕ್ಕತ್ತಲು ಅಡತಡೆಗಳಿವೆ, ಅದನ್ನು ಪರಿಹರಿಸಿ ಎಂದು ಒತ್ತಾಯಿಸಿದರು.
ಮಹಿಳೆಯ ಈ ವರ್ತನೆ ಕೆಲವರಿಗೆ ಪುಕ್ಕಟೆ ಮನೊರಂಜನೆ ನೀಡಿದರೆ ಇನ್ನು ಕೆಲವರಿಗೆ ನಗು ತಡೆಯಲಾಗಲಿಲ್ಲ.
ಮಾಧ್ಯಮ ಪ್ರತಿನಿಧಿಗಳ ಎದುರೂ ಪೋಸ್ ನೀಡಿದ ಮುಬಿನ್ ತಾಜ್ ದೇವಿ ಆವಾಹನೆಯಾದಂತೆ ವಿಚಿತ್ರ ವರ್ತನೆ ಮುಂದುವರಿಸಿ ಹಹಹಹಹಾ..ಎಂದು ನಾಲಿಗೆ ಹೊರಹಾಕಿ,ನಾನು ಮಹಾಕಾಳಿ…ನಾನು ಚಪ್ಪಲಿ ಹಾಕ್ಕೊಳ್ಬಾರ್ದಾ…ನೀನು ಹಾಕಿಲ್ವಾ..ಬೇಕಾ ನನ್ ಚಪ್ಪಲಿ . ಈ ಪ್ರಪಂಚದಲ್ಲಿ ಎಂಥಹವರನ್ನೆಲ್ಲಾ ಸೃಷ್ಟಿ ಮಾಡಿದ್ದೇನೆ ಗೊತ್ತಾ ? ಎಂದರು
ಸ್ಥಳಕ್ಕಾಗಮಿಸಿದ ಕುಶಾಲನಗರದ ಮಹಿಳಾ ಠಾಣಾ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ. ಈ ಸುದ್ದಿ ಈಗ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ
2014 ರಿಂದಲೇ ಜೆಡಿಎಸ್ ಬಿಜೆಪಿ ಮೈತ್ರಿಯಲ್ಲಿವೆ ಇದು ಹೊಸದೇನಲ್ಲ… HDK
Raids: ಕೊಪ್ಪಳ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪಾ ಮನೆ ಮೇಲೆ ಲೋಕಾಯುಕ್ತ ದಾಳಿ
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
Lok Sabha Election; ಇಂದಿನಿಂದ 14 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು